ಪುತ್ತೂರು: ಇಲ್ಲಿನ ಪ್ರತಿಷ್ಠಿತ 75 ವರ್ಷಗಳ ಪರಂಪರೆಯ ಮುಳಿಯ ಜ್ಯುವೆಲ್ಸ್ ಉಪ್ಪಿನಂಗಡಿಯ ನೆಲ್ಯಾಡಿಯಲ್ಲಿ ತನ್ನ ಬೆಳ್ಳಿ ಆಭರಣಗಳ 'ಸಿಲ್ವರಿಯಾ' ಶೋರೂಂನ್ನ ಆರಂಭಿಸಲಿದೆ. ಆರ್ಕಿಟೆಕ್ ಹಾಗೂ ಇಂಟೀರಿಯರ್ ಡಿಸೈನರ್ ರವೀಶ್ ಅವರಿಗೆ ಮುಳಿಯ ಸಹೋದರರಾದ ಕೇಶವ ಪ್ರಸಾದ್ ಮುಳಿಯ & ಕೃಷ್ಣ ನಾರಾಯಣ ಮುಳಿಯ ನಕ್ಷೆಯನ್ನು ನೀಡುವ ಮೂಲಕ ಕೆಲಸ ಆರಂಭಿಸಲಾಯಿತು.
ಈ ಸಿಲ್ವರಿಯಾ ಫ್ರಾಂಚೈಸಿ ಶಾಪ್ನಲ್ಲಿ ಮಾಸಿಕ ಕಂತುಗಳನ್ನು ಸ್ವೀಕರಿಸಲಾಗುವುದು. ಮುಂದೆ 2-3 ತಿಂಗಳಲ್ಲಿ ಈ ಶೋರೂಂ ಅನಾವರಣಗೊಳ್ಳಲಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ದಿಗ್ದರ್ಶಕರಾದ ಸರಾಫ್ ಮುಳಿಯ ಶ್ಯಾಮ ಭಟ್, ಕಟ್ಟಡದ ಮಾಲೀಕರಾದ ಶ್ರೀ ಸತೀಶ್ ಭಟ್, ಪುತ್ತೂರು ಶಾಖಾ ಪ್ರಬಂಧಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
إرسال تعليق