ವಿಶ್ರಾಂತ ಪ್ರಾಂಶುಪಾಲರಿಂದ ಗುರುಕುಲ ಶಿಕ್ಷಣ

Upayuktha
0

ವಿಶ್ರಾಂತ ಪ್ರಾಂಶುಪಾಲ ಸುಬ್ರಹ್ಮಣ್ಯ ಭಟ್ ಕೈಲಾರು ದಕ ಜಿಲ್ಲೆಯ ಬೆಳ್ತಂಗಡಿವಾಸಿ. ವಿಶ್ರಾಂತ ಎಂಬ ಹಣೆಪಟ್ಟಿ ಸರಕಾರಿ ದಾಖಲೆಗೆ ಮಾತ್ರ! ಅವರೀಗ ತುಂಬಾ ಸಕ್ರಿಯ ಉತ್ಸಾಹಿ ಕೃಷಿಕರು. ಕೆಳಗಿನ ಅವರದೇ ಮಾತುಗಳಿಂದ ನಿಮಗೆ ಚಿತ್ರ ಸ್ಪಷ್ಟವಾಗುತ್ತದೆ.


"ಒಂದೂವರೆ ವರ್ಷದಿಂದ ಕಾರ್ಬನ್ ಫೈಬರ್ ದೋಟಿಯಿಂದ ಅಡಿಕೆ ಕೊಯ್ಲು- ಸಿಂಪಡಣೆ ಮಾಡುತ್ತಾ ಅದರ ಪೂರ್ಣ ಪ್ರಯೋಜನ ಪಡೆಯುತ್ತಿದ್ದೇನೆ. ತೆಂಗು, ಹಲಸು ಕೊಯ್ಲಿಗೂ ಉಪಯೋಗಿಸುತ್ತಿದ್ದೇನೆ. ಎಲ್ಲಾ ಕೃಷಿಕ ಬಾಂಧವರೂ ಇದರ ಪ್ರಯೋಜನ ಪಡೆಯಲಿ ಎಂಬುದು ನನ್ನ ಆಶಯ"


"ಆತ್ಮೀಯ ಪನ್ಯ ಶಂಕರ ಭಟ್ಟರ ಕೋರಿಕೆಯ ಮೇರೆಗೆ ಇಂದು ನನ್ನ ತೋಟದಲ್ಲಿ ಐದು ಮಂದಿ ಗದಗದ ಯುವಕರಿಗೆ ಕಾರ್ಬನ್ ‌ಫೈಬರ್ ದೋಟಿಯ ಮೂಲಕ ಔಷಧ ಸಿಂಪಡಣೆಯ ಮಾಹಿತಿ ಕೊಟ್ಟೆವು. ಪ್ರತಿಯೊಬ್ಬರೂ ಬಹಳ ಉತ್ಸಾಹದಿಂದ ತೊಡಗಿಸಿಕೊಂಡರು. ಅಡಿಕೆ ಮರ ಏರಿ ಕೊಯ್ಲು ಮಾಡುವವರೊಬ್ಬರು ಇಂದು ಸಂಜೆ ಫೋನಾಯಿಸಿ ನಾನು ಬರಲೇ ಎಂದು ಕೇಳಿದರು. ಇದು ನಿಜಕ್ಕೂ ಬದಲಾವಣೆಯ ಲಕ್ಷಣ."


ಮರುದಿನದ ಸುದ್ದಿ: "ಇವತ್ತು ಬಂದ ಮರ ಏರಿ ಕೊಯ್ಲು ಮತ್ತು ಔಷಧ ಸಿಂಪಡಣೆ ಮಾಡುವವರು, ಇನ್ನು ದೋಟಿ ಉಪಯೋಗಿಸುತ್ತಾರಂತೆ. ಗದಗದ ಇಬ್ಬರು ಯುವಕರು ಅವರು ದುಡಿಯುವ ತೋಟದಲ್ಲಿ ಈ ಶುಕ್ರವಾರವೇ ಔಷಧ ಸಿಂಪಡಣೆ ಪ್ರಾರಂಭಿಸುವ ಹುಮ್ಮಸ್ಸಿನಲ್ಲಿದ್ದಾರೆ."


ಎರಡು ವಿಚಾರಗಳಿಲ್ಲಿ ಗಮನಾರ್ಹ. (1) ಯಾವುದೇ ಕಲಿಕೆ ಡಿಮಾಂಡ್ ಡ್ರಿವನ್ (ಬೇಡಿಕೆ ಆಧಾರಿತ) ಆದರದ ಫಲಿತಾಂಶ ತುಂಬ ಉತ್ತೇಜಕ.


(2) ಈ ವಿಶ್ರಾಂತ ಪ್ರಾಂಶುಪಾಲರು ಊರಿನ ಸಹಕಾರಿ ಸಂಘ/ ರೈತೋತ್ಪಾದಕ ಕಂಪೆನಿಯಂತಹ ಸಂಸ್ಥೆಗಳು ಮಾಡಬೇಕಾದ ದೂರದೃಷ್ಟಿಯ ಸತ್ಕಾರ್ಯ ಮಾಡಿದ್ದಾರೆ. ಎಲ್ಲಾ ಕೃಷಿಕಪರ ಸಂಸ್ಥೆಗಳಿಗಿದು ಪ್ರೇರಣೆಯಾಗಲಿ.


- ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top