ಪುತ್ತೂರು: ದೌರ್ಜನ್ಯ ಎಸಗುವ ಮೈಕ್ರೋ ಫೈನಾನ್ಸ್ ವಿರುದ್ಧ ಪ್ರತಿಭಟನೆ

Upayuktha
0

ಪುತ್ತೂರು: ಆಧಾರ ರಹಿತ ಬ್ಯಾಂಕ್ ಸಾಲ ನೀಡಿ ವಸೂಲು ನೆಪದಲ್ಲಿ ಮಹಿಳೆಯರ ಮೇಲೆ  ದೌರ್ಜನ್ಯ ಎಸಗುತ್ತಿರುವ  ಮೈಕ್ರೋ ಫೈನಾನ್ಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪುತ್ತೂರು ತಾಲೂಕು ಕರ್ನಾಟಕ ರಾಜ್ಯ ಋಣಮುಕ್ತ ಹೋರಾಟ ಸಮಿತಿ, ಸೇವಾ ಟ್ರಸ್ಟ್ ವತಿಯಿಂದ ಪ್ರತಿಭಟನಾ ಸಭೆ ನಗರದ ಮಿನಿ ವಿಧಾನಸೌಧದ ಎದುರು ನಡೆಯಿತು.


ಪ್ರತಿಭಟನೆಯನ್ನುದ್ದೇಶಿಸಿ ಸಮಿತಿ ಮುಖಂಡ, ನ್ಯಾಯವಾದಿ ಬಿ.ಎಂ.ಭಟ್ ಮಾತನಾಡಿ, ಮೈಕ್ರೋ ಫೈನಾನ್ಸ್ ಎಂಬ ಭೂತ ಮಹಿಳೆಯರು ಸ್ವಾವಲಂಬಿಗಳನ್ನಾಗಿ, ಸಬಲರನ್ನಾಗಿಸುವ ನೆಪ ಇಟ್ಟುಕೊಂಡು ಆಧಾರ ರಹಿತ ಸಾಲ ನೀಡಿ ವಸೂಲಿಗಾಗಿ ಮಹಿಳೆಯರ ಮನೆ ಬಾಗಿಲಿಗೆ ಬಂದು ದೌರ್ಜನ್ಯ ಎಸಗುತ್ತಿದೆ. ಮಹಿಳೆಯರಿಗೆ ನ್ಯಾಯ ಒದಗಿಸುವಲ್ಲಿ ರಾಜ್ಯ ಬಿಜೆಪಿ ಸರಕಾರ ವಿಫಲವಾಗಿದೆ. ಮೊದಲೇ ಕೊರೊನಾದಿಂದಾಗಿ ತತ್ತರಿಸಿರುವ ಕುಟುಂಬ ಕೇಂದ್ರ ಸರಕಾರದ ಬೆಲೆ ಏರಿಕೆಯಿಂದ ಮತ್ತಷ್ಟು ಹೈರಾಣಾಗಿದೆ. ಈ ನಡುವೆ ಸಾಲ ನೀಡಿದ ಮೈಕ್ರೋ ಫೈನಾನ್ಸ್‌ಗಳು ಗೂಂಡಾಗಳಂತೆ  ವರ್ತಿಸಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿವೆ. ಮುಂದಿನ ದಿನಗಳಲ್ಲಿ ಸಾಲ ವಸೂಲಿ ನೆಪದಲ್ಲಿ ಫೈನಾನ್ಸ್ ಗೂಂಡಾಗಳು ಮನೆಗೆ ಬಂದರೆ, ಮಹಿಳೆಯರ ಮೇಲಿನ ದೌರ್ಜನ್ಯ ಸರಕಾರಕ್ಕೆ ಅರ್ಥ ಆಗದಿದ್ದರೆ ಪ್ರತಿಯೊಂದು ಮನೆಯ ಮಹಿಳೆಯರು ಒನಕೆ ಓಬವ್ವ ಆಗಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.


ಪ್ರತಿಭಟನೆಯಲ್ಲಿ ಸಮಿತಿಯ ಗಂಗಾಧರ ಮಯ್ಯ, ಋಣಮುಕ್ತ ಹೋರಾಟ ಸಮಿತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಈಶ್ವರಿ, ರಾಮಚಂದ್ರ ಮತ್ತಿತರ ಪದಾಧಿಕಾರಿಗಳು, ಮಹಿಳೆಯರು ಪಾಲ್ಗೊಂಡಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top