ಪುತ್ತೂರು.ಜ.20: ಪ್ರತಿಯೊಬ್ಬರ ಜೀವನದಲ್ಲೂ ಗೆಳೆತನ ಎಂಬುದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಮ್ಮ ಜೀವನದಲ್ಲಿ ಒದಗುವ ಪ್ರತಿಯೊಂದು ಸಮಸ್ಯೆಯನ್ನು ಮನೆಯವರ ಬಳಿ ತೋಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ನಮ್ಮ ಸಮಸ್ಯೆಯನ್ನು ಅರಿತು ಅದಕ್ಕೆ ಸೂಕ್ತ ಪರಿಹಾರವನ್ನು ನೀಡಿ ನಮ್ಮೊಂದಿಗಿರುವವರು ಸ್ನೇಹಿತರು ಎಂದು ವಿವೇಕಾನಂದ ಪದವಿ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಯೋಜನಾಧಿಕಾರಿ ಶ್ರೀನಾಥ್.ಬಿ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಯೋಜಿಸಿದ ಮಣಿಕರ್ಣಿಕಾ ಮಾತುಗಾರರ ವೇದಿಕೆ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಭಾಗವಹಿಸಿ ಗೋಲ್ಡನ್ ಗ್ಯಾಂಗ್ ಎಂಬ ವಿಷಯದ ಕುರಿತು ಗುರುವಾರ ಮಾತನಾಡಿ ತಾವು ಮಾಡಿದ ಮೋಜು ಮಸ್ತಿಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಲೆಫ್ಟಿನೆಂಟ್ ಬಾಮಿ ಅತುಲ್ ಶೆಣೈ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ತಾವು ಮಾಡಿದ ತರ್ಲೆ ತುಂಟಾಟವನ್ನು ಮೆಲುಕು ಹಾಕಿದರು. ಸ್ನೇಹ ಎಂಬುದು ವಿದ್ಯಾರ್ಥಿಜೀವನ ಮುಗಿದ ಮೇಲೂ ಒಟ್ಟಾಗಿ ಮುಂದುವರೆಯುವುದು ಅಪರೂಪವೇ ಸರಿ. ಗೆಳೆತನ ವಿದ್ಯಾರ್ಥಿಜೀವನಕ್ಕೆ ಸೀಮಿತವಾಗಿರದೆ ಭವಿಷ್ಯದಲ್ಲೂಅದನ್ನು ಮುಂದುವರಿಸಿಕೊಂಡು ಹೋಗಬೇಕು. ಈ ಸಂಬಂಧ ನಿರಂತರವಾಗಿರಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭ ಪತ್ರಿಕೋದ್ಯಮದ ವಿದ್ಯಾರ್ಥಿಗಳಾದ ತನುಶ್ರೀ ಬೆಳ್ಳಾರೆ, ಅಂಶಿ ಶೆಟ್ಟಿ, ಚೈತ್ರಾ ಭಟ್, ಸಂದೀಪ್.ಎಸ್ ಮಂಚಿಕಟ್ಟೆ, ಸುಪ್ರಿಯಾ ಹೊಸಮನೆ, ನಮನ್ ಶೆಟ್ಟಿ, ನೀತಾರವೀಂದ್ರ, ಪ್ರತೀಕ್ಷಾ ಪೂಜಾರಿ, ಹರ್ಷಿತಾ, ಶ್ರಾವ್ಯ, ಮಂಜುನಾಥ್, ಪವನ್ಕುಮಾರ್, ಕೃತಿ , ಶುಭ್ರ ಪುತ್ರಕಳ, ಅಶ್ವಿನ್, ಧೀರಜ್.ಪಿ, ಸಿಂಧು.ಎಸ್, ದೀಪ್ತಿ ಅಡ್ಡಂತಡ್ಕ ವೇದಿಕೆಯಲ್ಲಿ ತಮ್ಮ ಗೋಲ್ಡನ್ ಗ್ಯಾಂಗ್ ಅನ್ನು ಪರಿಚಯಿಸಿಕೊಂಡು ಅವರೊಂದಿಗಿನ ಸಿಹಿ ನೆನಪನ್ನು ಹಂಚಿಕೊಂಡರು.
ವಾರದ ಉತ್ತಮ ಮಾತುಗಾರ್ತಿಯಾಗಿ ಪ್ರಥಮ ಪತ್ರಿಕೋದ್ಯಮದ ಸುಪ್ರಿಯ ಹೊಸಮನೆ ಪ್ರಶಸ್ತಿ ಪತ್ರವನ್ನು ಪಡೆದುಕೊಂಡರು, ಹಾಗೂ ಉತ್ತಮ ಮಾತುಗಾರರ ತಂಡವಾಗಿ ಪ್ರಥಮ ಪತ್ರಿಕೋದ್ಯಮ ತಂಡವು ಪ್ರಶಸ್ತಿಯನ್ನು ಬಾಚಿಕೊಂಡಿತು.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ.ಪಿ.ಆರ್ ನಿಡ್ಪಳ್ಳಿ ,ಮಣಿಕರ್ಣಿಕಾ ಕಾರ್ಯಕ್ರಮದ ಕಾರ್ಯದರ್ಶಿ ಕೃತಿಕಾ ಸದಾಶಿವ ಹಾಗೂ ಪ್ರಥಮ, ದ್ವಿತೀಯ ಮತ್ತುತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತೃತೀಯ ಬಿ.ಎ ವಿದ್ಯಾರ್ಥಿಗಳಾದ ಕೃತಿಕಾ.ಕೆ ಸ್ವಾಗತಿಸಿ, ಯಶ್ವಿತಾ ಪಿ.ಟಿ ವಂದಿಸಿದರು, ಧೀರಜ್.ಪಿ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ