ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ ರೆಮೋನಾ ಪೆರೇರಾ
ಮಂಗಳೂರು: ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ ಪ್ರಶಸ್ತಿ ವಿಜೇತ ರಾಜ್ಯದ ಏಕೈಕ ಬಾಲಕಿ ಮಂಗಳೂರಿನ ಭರತನಾಟ್ಯ ಕಲಾವಿದೆ ರೆಮೋನಾ ಪರೇರಾ ಅವರಿಗೆ ಜ.24ರ ಸೋಮವಾರ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ನವದೆಹಲಿಯಿಂದ ವರ್ಚ್ಯೂವಲ್ ಮಾಧ್ಯಮದ ಮೂಲಕ ಪ್ರಶಸ್ತಿ ವಿತರಿಸಿದರು. ಬಳಿಕ ಅವರ ಸಾಧನೆಯನ್ನು ಕೊಂಡಾಡಿದರು.
ಮಂಗಳೂರಿನ ಫಳ್ನೀರ್ ನಿವಾಸಿ ಗ್ಲಾಡಿಸ್ ಪೆರೇರಾ ಅವರ ಪುತ್ರಿ ರೆಮೋನ ಎವೆಟ್ಟಾ ಪೆರೇರಾ. 17 ವರ್ಷ. ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ್ ಪುರಸ್ಕಾರ್ಗೆ ಈ ಬಾರಿ ರಾಜ್ಯದಿಂದ ಆಯ್ಕೆಯಾದ ಮಂಗಳೂರಿನ ಬಾಲಕಿ.
ನಗರದ ಜಿಲ್ಲಾ ಪಂಚಾಯತ್ನ ಎನ್.ಐ.ಸಿ ವಿಡಿಯೋ ಕಾನ್ಪರೆನ್ಸ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ನ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ. ಕುಮಾರ್, ಕಳೆದ ಬಾರಿಯ ಪ್ರಶಸ್ತಿ ಪುರಸ್ಕøತ ರಾಕೇಶ್ ಕೃಷ್ಣ, ಗ್ಲಾಡಿಸ್ ಪೆರೇರ, ಅವರೊಂದಿಗೆ ವಚ್ರ್ಯುವಲ್ ಮಾಧ್ಯಮದ ಮೂಲಕ ಪ್ರಧಾನ ಮಂತ್ರಿಯವರಿಂದ ರೆಮೋನಾ ಪರೇರಾ ಅವರು ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯನ್ನು ಪಡೆದರು. ಪ್ರಶಸ್ತಿಯ ಮೊತ್ತ ಒಂದು ಲಕ್ಷ ರೂ.ಗಳ ನಗದನ್ನು ಅವರ ಬ್ಯಾಂಕ್ ಖಾತೆಗೆ ಆನ್ಲೈನ್ ಮುಖಾಂತರ ವರ್ಗಾವಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಪ್ರಶಸ್ತಿ ಪುರಸ್ಕೃತ ಮಕ್ಕಳೊಂದಿಗೆ ಮಾತನಾಡಿದರು.
ಕರ್ನಾಟಕದಿಂದ ಆಯ್ಕೆಯಾಗಿದ್ದ ರೆಮೋನ ಎವೆಟ್ಟಾ ಪೆರೇರಾ ಅವರಿಗೆ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಅಂಗವಾಗಿ ನಿಮಗೆ ಹಾಗೂ ದೇಶದ ಎಲ್ಲಾ ಹೆಣ್ಣು ಮಕ್ಕಳಿಗೆ ಈ ದಿನಾಚರಣೆಯ ಶುಭಾಷಯಗಳನ್ನ ಕೋರುತ್ತೇನೆ ಎಂದು ಮಾತುಗಳನ್ನು ಆರಂಭಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ವಿದ್ಯಾರ್ಥಿನಿಯೊಂದಿಗೆ ಮಾತನಾಡುತ್ತಾ ನೃತ್ಯದ ಬಗೆಗಿರುವ ಒಲವು ತಮ್ಮಲ್ಲಿ ಹೇಗೆ ಪ್ರಾರಂಭವಾಯಿತು, ತಾವು ಮೂರು ವರ್ಷದ ಮಗುವಾಗಿದ್ದಾಗ ನೃತ್ಯ ತರಬೇತಿ ಪಡೆಯುತ್ತಿದ್ದದ್ದು ನಿಮ್ಮ ಸ್ವಯಂ ಇಚ್ಚೆಯಿಂದಲೋ ಅಥವಾ ಮನೆಯವರ ಇಷ್ಟದಿಂದಲೋ ಎಂದು ಕೇಳಿದರು.
ಪ್ರಧಾನಮಂತ್ರಿಗಳ ಪ್ರಶ್ನೆಗೆ ಉತ್ತರಿಸಿದ ರೆಮೋನಾ ಪರೇರಾ ಅವರು ನನ್ನ ತಾಯಿಗೆ ನೃತ್ಯದಲ್ಲಿ ತೀವ್ರ ಆಸಕ್ತಿ ಇದ್ದ ಕಾರಣ ನನಗೆ ಸಣ್ಣ ವಯಸ್ಸಿನಿಂದಲೂ ಅವರು ನನಗೆ ನೃತ್ಯ ಕಲಿಸುತ್ತಿದ್ದರು. ನನ್ನ ತಾಯಿ ಕಲಿಸುತ್ತಿದ್ದದ್ದು ಭಾರತೀಯ ಸಂಸ್ಕøತಿಗೆ ಹೋಲಿಕೆಯಾಗುತ್ತಿದ್ದ ಕಾರಣ ಇದು ನನಗೆ ಪ್ರೇರಣೆ ನೀಡಿತು, ಜತೆಗೆ ನನಗೂ ನೃತ್ಯ ಕಲಿಯಲು ಆಸಕ್ತಿ ಹೆಚ್ಚಾಯಿತು ಭಾರತೀಯ ಸಂಸ್ಕೃತಿಯ ವೈವಿಧ್ಯತೆ, ಶ್ರೀಮಂತಿಕೆಯನ್ನು ವಿಶ್ವದಾದ್ಯಂತ ಪಸರಿಸುವುದು ನನ್ನ ಗುರಿಯಾಗಿದೆ ಎಂದು ಉತ್ತರಿಸಿದರು.
ಆ ನಂತರ ಪ್ರಧಾನಿಯವರು ಈ ಕಲಿಕಾ ವಿಧಾನದಲ್ಲಿ ನಿಮಗೆ ಹಲವಾರು ಸವಾಲುಗಳು ಎದುರಾಗಿರಬಹುದು ಅವುಗಳನ್ನು ಹೇಗೆ ನಿಭಾಯಿಸಿದಿರಿ ಎಂದು ಪ್ರಶ್ನಿಸಿದರು.
ತಂದೆ ವಿಧಿವಶರಾದ ನಂತರ ತಾಯಿಗೆ ಜೀವನ ನಿರ್ವಹಣೆ ಕಷ್ಟವಾಯಿತಾದರು ನನಗೆ ಮತ್ತು ನನ್ನ ಸಹೋದರನಿಗೆ ಉತ್ತಮ ಶಿಕ್ಷಣ ಕೊಡಿಸಿದರು, ಜತೆಗೆ ಆರ್ಥಿಕ ಅಡಚಣೆ ಇದ್ದರೂ ಕೂಡ ನನಗೆ ನೃತ್ಯ ಶಾಲೆಗೆ ದಾಖಲಿಸಿ ತರಬೇತಿ ಕೊಡಿಸಿದರು.
ನನ್ನ ತಾಯಿ ಹಾಗೂ ಗುರುಗಳಿಗೆ ನೃತ್ಯದ ಮೂಲಕವೇ ಒಳ್ಳೆಯ ಹೆಸರು, ಗೌರವ ತಂದುಕೊಡಬೇಕೆಂಬುದೇ ನನ್ನ ಗುರಿಯಾಗಿದೆ. ಅದಕ್ಕಾಗಿ ನಾನು ಅತೀವ ಶ್ರಮ ವಹಿಸಿ ನೃತ್ಯಾಭ್ಯಾಸ ಮಾಡಿದೆ ಎಂದರು.
ಇದಕ್ಕೆ ಪ್ರತಿಕ್ರೀಯಿಸಿದ ಮೋದಿಯವರು ತಾವು ತುಂಬಾ ಅದೃಷ್ಟವಂತೆ ತಮ್ಮ ತಾಯಿಯ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದಿದ್ದರೂ ಕೂಡ ತಮಗೆ ಒಳ್ಳೆಯ ಶಿಕ್ಷಣ ಕೊಡುದರೊಂದಿಗೆ ತಮ್ಮ ನೃತ್ಯ ಕಲೆಯನ್ನು ಪ್ರೋತ್ಸಾಹಿಸಿ, ತಮ್ಮ ಕನಸನ್ನು ನನಸಾಗಿಸಿದ್ದಾರೆ ಅದಕ್ಕಾಗಿ ನಾನು ಅವರಿಗೆ ವಿಶೇಷವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.
ಭರತನಾಟ್ಯದ ವಿವಿಧ ಪ್ರಕಾರಗಳಲ್ಲಿ ಅಂದರೆ ಗಾಜಿನ ಮೇಲೆ ತಾವು ಅತಿ ಉತ್ತಮವಾಗಿ ನೃತ್ಯ ಮಾಡುತ್ತಿರಿ ಎಂದು ತಿಳಿದಿದೆ ಎಂದು ಕೇಳಿದಾಗ, ಉತ್ತರಿಸಿದ ರೇಮೋನಾ, ಮೊದ ಮೊದಲು ಗಾಜಿನ ಮೇಲೆ ನೃತ್ಯ ಮಾಡುವುದು ಕಷ್ಟವಾಗುತ್ತಿತ್ತು, ನನ್ನ ತಾಯಿಯ ನಿರಂತರವಾಗಿ ತುಂಬುತ್ತಿದ್ದ ಆತ್ಮವಿಶ್ವಾಸದ ಪರಿಣಾಮ ಮೊದಲು ಗಾಜಿನ ಮೇಲೆ ನಿಲ್ಲುವುದು ಕಲಿತುಕೊಂಡೆ, ಅದರೆ ಸಾಕಷ್ಟ ಸಮಯ ಬೇಕಾಯಿತು, ನಂತರ ಅದರ ಮೇಲೆ ಅಭ್ಯಾಸ ಆರಂಭಿಸಿದೆ, ಈ ವೇಳೆ ಹಲವ ಬಾರಿ ಗಾಜಿನ ತುಂಡುಗಳು ನನಗೆ ಗಾಯವನ್ನು ಮಾಡಿವೆ ಎಂದು ಹೇಳಿದರು.
ನಂತರ ಮಾತನಾಡಿದ ಪ್ರಧಾನಮಂತ್ರಿಯವರು ನಿಮ್ಮ ತಾಯಿಯ ಸಂಪೂರ್ಣ ಅರ್ಪಣಾ ಮನೋಭಾವದಿಂದ ನಿಮ್ಮ ಸಾಧನೆಗೆ ಪ್ರೇರಣೆಯಾಗಿದ್ದಾರೆ, ಅವರಿಗೆ ಮತ್ತೋಮೆ ವಿಶೇಷ ಅಭಿನಂದನೆಗಳು, ನಿಮಗೆ ಒಲಿದಿರುವ ಕಲೆ, ಅದಕ್ಕೆ ನೀವು ಮಾಡಿದ ಸಾಧನೆ ತಪಸ್ಸು ಎಂದು ಬಣ್ಣಿಸಿದರು.
ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಸ್ಮೃ ತಿ ಇರಾನಿ, ರಾಜ್ಯ ಖಾತೆ ಸಚಿವರಾದ ಮಹೇಂದ್ರ, ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ವಿಜೇತರಾದ ಮಾಸ್ಟರ್ ಅವಿ ಶರ್ವ, ಪೂರ್ವಿ, ಧೀರಜ್ ಕುಮಾರ್, ತರುಷಿ ಕೌರ್ ಅವರು ಪ್ರಧಾನ ಮಂತ್ರಿಯವರೊಂದಿಗೆ ಮಾತನಾಡಿದರು.
ಸಿಇಒ ಅವರಿಂದ ಸನ್ಮಾನ:
ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ವಿಸಿ ಹಾಲ್ನಲ್ಲಿ ರಾಷ್ಟ್ರೀಯ ಬಾಲ ಪುರಸ್ಕಾರ ವಿಜೇತರಾದ ರೆಮೋನ ಎವೆಟ್ಟಾ ಪೆರೇರ ಮತ್ತು ಕಳೆದ ಬಾರಿ ಸಂಶೋಧನಾ ವಿಭಾಗದಲ್ಲಿ ಬಾಲ ಪುರಸ್ಕಾರ ಪಡೆದ ರಾಕೇಶ್ ಕೃಷ್ಣ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು.