ಬೆಂಗಳೂರು: ಹಲವು ವರ್ಷಗಳಿಂದ ಈಟಿವಿಯಲ್ಲಿ ಪ್ರಸಾರವಾಗುತ್ತಿದ್ದ " ಎದೆ ತುಂಬಿ ಹಾಡುವೆನು" ಜನಪ್ರಿಯ ಸಂಗೀತ ಸ್ಪರ್ಧಾ ಸರಣಿ ಕಲರ್ಸ್ ಕನ್ನಡದಲ್ಲಿ ಕಳೆದ ಆಗಸ್ಟ್ ತಿಂಗಳಿಂದ ಪ್ರಸಾರವಾಗಿದ್ದು ಗಾಯಕ ಚಿನ್ಮಯ್ ಜೋಷಿ ಕಾರ್ಯಕ್ರಮದ ವಿನ್ನರ್ ಆಗಿದ್ದಾರೆ.
ಶನಿವಾರ ಹಾಗೂ ಭಾನುವಾರ ನಡೆದ ಸ್ಪರ್ಧಾ ಸಮರದಲ್ಲಿ ಅಂತಿಮ ಹಂತ ತಲುಪಿದ 6 ಸ್ಪರ್ಧಿಗಳ ಪೈಕಿ ನಾಲ್ವರು ಗಾಯಕರು ಅಂತಿಮ ಸುತ್ತು ಪ್ರವೇಶಿಸಿದರು.
ಕೊನೆಯದಾಗಿ ಕಠಿಣ ಹಾಡು ಹಾಡಿದ ಮಂಗಳೂರಿನ ಸಂದೇಶ್ ನೀರುಮಾರ್ಗ ಹಾಗೂ ಚಿನ್ಮಯ್ ಉಳಿದುಕೊಂಡರು. ಅಂತಿಮವಾಗಿ 2021 ರ ಎದೆ ತುಂಬಿ ಹಾಡುವೆನು ವಿನ್ನರ್ ಆಗಿ ಗಾಯಕ ಚಿನ್ಮಯ್ ಹತ್ತು ಲಕ್ಷ ರೂಪಾಯಿ ನಗದು ಬಹುಮಾನ ಪಡೆದುಕೊಂಡರು. ಹಾಗೂ ರನ್ನರ್ ಅಪ್ ಸ್ಥಾನ ಪಡೆದ ಸಂದೇಶ್ ಅವರಿಗೆ ರೂ. 5 ಲಕ್ಷ ನಗದು ಬಹುಮಾನ ದೊರೆಯಿತು.