|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪುಸ್ತಕ ಅಧ್ಯಯನದಿಂದ ಜ್ಞಾನ ವೃದ್ಧಿಯಾದರೆ ಪ್ರಾಯೋಗಿಕ ಅಧ್ಯಯನದಿಂದ ಅನುಭವ ವೃದ್ಧಿ: ಎ.ಪಿ. ಸದಾಶಿವ ಮರಿಕೆ

ಪುಸ್ತಕ ಅಧ್ಯಯನದಿಂದ ಜ್ಞಾನ ವೃದ್ಧಿಯಾದರೆ ಪ್ರಾಯೋಗಿಕ ಅಧ್ಯಯನದಿಂದ ಅನುಭವ ವೃದ್ಧಿ: ಎ.ಪಿ. ಸದಾಶಿವ ಮರಿಕೆ



ಪುತ್ತೂರು: ಎಷ್ಟೇ ವಿದ್ಯೆ ಕಲಿತರು ಕೃಷಿ ವಿದ್ಯೆ ಮೇಲು. ಕೃಷಿ ಮಾಡದಿದ್ದರೆ ಜೀವನಚಕ್ರ ನಡೆಸಲು ಬಹಳ ಕಷ್ಟ ಜ್ಞಾನದ ಮಾತುಗಳನ್ನು ಮರೆಯಬಹುದು. ಆದರೆ ಅನುಭವದ ಪಾಠಗಳನ್ನು ಮರೆಯಲಾಗದು. ಕಲಿಯುವುದೇ ಜೀವನ. ಪುಸ್ತಕ ಅಧ್ಯಯನದಿಂದ ಜ್ಞಾನ ವೃದ್ಧಿಯಾದರೆ, ಪ್ರಾಯೋಗಿಕ ಅಧ್ಯಯನದಿಂದ ಅನುಭವ ವೃದ್ಧಿಯಾಗುತ್ತದೆ. ಅಂತಹ ಅನುಭವ ಜೀವನಕ್ಕೆ ಬಹಳ ಮುಖ್ಯ ಎಂದು ಸಾವಯವ ಕೃಷಿಕ ಎ.ಪಿ. ಸದಾಶಿವ ಹೇಳಿದರು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗ ಮತ್ತು ಸಸ್ಯ ಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ಘಟಕ ಇದರ ಸಹಯೋಗದಲ್ಲಿ ನೇಚರ್ ಕ್ಲಬ್, ರಾಷ್ಟ್ರೀಯ ‘ರೈತ ದಿನ’ದ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ‘ಸಾವಯವ ಕೃಷಿ’ ಎಂಬ ವಿಷಯದ ಕುರಿತು ಗುರುವಾರ ಅವರು ಮಾತನಾಡಿದರು.


ಹಿಂದಿನ ಕಾಲದಲ್ಲಿ ಗದ್ದೆಯಲ್ಲಿ ಕೃಷಿ ಮಾಡುವಾಗ ಅದೆಷ್ಟೋ ಪ್ರಾಣಿಗಳು, ಪಕ್ಷಿಗಳು, ಜಲಚರಗಳು ಕಾಣಸಿಗುತ್ತಿತ್ತು. ಅವುಗಳಿಗೆ ಆಸರೆಯಾಗಿತ್ತು. ಆದರೆ ಈಗಿನ ಕಾಲದಲ್ಲಿ ರಾಸಾಯನಿಕ ಔಷಧಿಗಳು, ಕ್ರಿಮಿನಾಶಕಗಳನ್ನು ಕೃಷಿಯಲ್ಲಿ ಬಳಸುವುದರಿಂದ ಅದೆಷ್ಟೋ ಜೀವಿಗಳು ನಾಶವಾಗುವುದರ ಜೊತೆಗೆ, ಸಸ್ಯಗಳು ನಾಶವಾಗುತ್ತಿವೆ. ಬಳಕೆಗೆ ಬಾರದ ಸಸ್ಯ ಯಾವುದು ಇಲ್ಲ. ಸಸ್ಯಗಳು ಆರೋಗ್ಯ ಕಾಪಾಡಲು ಮತ್ತು ಭೂಮಿಯಲ್ಲಿನ ಫಲವತ್ತತೆಯನ್ನು ಕಾಪಾಡಲು ತುಂಬಾ ಅವಶ್ಯಕ. ಸಸ್ಯಗಳ ನಾಶದಿಂದ ಭೂಮಿಯಲ್ಲಿ ಉಷ್ಣಾಂಶ ಹೆಚ್ಚಾಗಿ ಮಳೆಯು ಕಡಿಮೆಯಾಗುತ್ತಿದೆ. ಮನುಷ್ಯ ಸೃಷ್ಟಿಯ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾನೆ. ಕೃಷಿಯನ್ನು ಬಿಟ್ಟರೆ ಪ್ರಕೃತಿಗೆ ಮೋಸ, ಪ್ರಕೃತಿಯಿಂದಲೇ ನಮ್ಮ ಉಳಿವು ಎಂದು ತಮ್ಮ ಕೃಷಿ ಜೀವನದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುವುದರ ಜೊತೆಗೆ, ವಿದ್ಯಾರ್ಥಿಗಳಿಗೆ ಹಲವು ವಿಧದ ಔಷಧಿ ಗಿಡಗಳನ್ನು ಪ್ರದರ್ಶಿಸಿ ಅವುಗಳ ಉಪಯೋಗಗಳನ್ನು ತಿಳಿಸಿದರು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, ಈಗಿನ ಯುವಜನಾಂಗಕ್ಕೆ ಕೃಷಿಯ ಬಗ್ಗೆ ಜ್ಞಾನವೂ ಇಲ್ಲ ಆಸಕ್ತಿಯೂ ಇಲ್ಲ, ಕೃಷಿಯ ಪ್ರಯೋಜನವನ್ನು ತಿಳಿದು ಅದರಿಂದ ಪ್ರೇರೇಪಿತರಾಗಿ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಅದನ್ನು ಬೆಳೆಸಬೇಕು. ಕೃಷಿಯಲ್ಲಿ ವಾತಾವರಣದ ಏರುಪೇರಿನಂದಾಗಿ ಹಲವು ಸಮಸ್ಯೆಗಳಿದ್ದರೂ, ಕೃಷಿ ಮಾಡುವಾಗ ಸಿಗುವ ಸಂತೋಷ ಬೇರೆಯೇ ಎಂದು ತಮ್ಮ ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಈಶ್ವರ ಭಟ್ ಮತ್ತು ಉಪನ್ಯಾಸಕ ಸುಹಾಸ್ ಕೃಷ್ಣ ಮತ್ತು ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀಕೃಷ್ಣ ಗಣರಾಜ ಭಟ್ ಹಾಗೂ ಉಪನ್ಯಾಸಕಿ ಸ್ಮಿತಾ ಪಿ.ಜಿ. ಉಪಸ್ಥಿತರಿದ್ದರು.


ತೃತೀಯ ಬಿ.ಎಸ್.ಸಿ. ವಿದ್ಯಾರ್ಥಿಗಳಾದ ಸಿಂಚನ ವಿ.ಬಿ.ಸ್ವಾಗತಿಸಿ, ಪ್ರತೀಕ್ಷಾ ಕೆ.ಎಲ್. ವಂದಿಸಿದರು. ಅಪೇಕ್ಷ ಕಾರ್ಯಕ್ರಮವನ್ನು ನಿರೂಪಿಸಿದರು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post