|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶಾಲೆಯಲ್ಲಿ ಮೊಟ್ಟೆ ನೀಡುವುದನ್ನು ವಿರೋಧಿಸಿ ಮಗನ ಟಿ.ಸಿ ವಾಪಸ್ ಪಡೆದ ತಂದೆ

ಶಾಲೆಯಲ್ಲಿ ಮೊಟ್ಟೆ ನೀಡುವುದನ್ನು ವಿರೋಧಿಸಿ ಮಗನ ಟಿ.ಸಿ ವಾಪಸ್ ಪಡೆದ ತಂದೆ

ಕೊಪ್ಪಳ: ಶಾಲೆಯಲ್ಲಿ ಸರ್ಕಾರವು ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆಯನ್ನು ಪ್ರಾರಂಭಿಸಿದೆ. ಇದಕ್ಕೆ ಅನೇಕ ಪರ - ವಿರೋಧ ಚರ್ಚೆಗಳು ನಡೆಯುತ್ತಲೇ ಇದೆ.  ಆದರೆ ಮಗನಿಗೆ ಶಾಲೆಯಲ್ಲಿ ಮೊಟ್ಟೆ ನೀಡುತ್ತಾರೆಂದು ಟಿ.ಸಿ ಯನ್ನು ವಾಪಸ್ ಪಡೆದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ವೀರಣ್ಣ ಮಗನ ಟಿ.ಸಿ ಪಡೆದು ಖಾಸಗಿ ಶಾಲೆಗೆ ಸೇರಿಸಿದ್ದಾರೆ. "ನಾವು ಬಸವ ಧರ್ಮದ ಆರಾಧಕರು. ನನ್ನ ಮಗ ಒಂದೆರಡು ದಿನ ಮೊಟ್ಟೆ ತಿನ್ನದೆ ಬಿಡಬಹುದು. ಬಳಿಕ ಮೊಟ್ಟೆ ತಿನ್ನೋದನ್ನು ಕಲಿತು ಮನೆಯಲ್ಲಿ ಮಾಡಿಕೊಡಿ ಎಂದರೆ ಏನು ಮಾಡಬೇಕು" ಎಂದು ಪ್ರಶ್ನಿಸಿದ್ದಾರೆ.

ಈ ರೀತಿಯಾಗಿ ಸರ್ಕಾರ ಮೊಟ್ಟೆ ಕೊಡುವ ಯೋಜನೆಗೆ ಸ್ಬಾಮೀಜಿಗಳು, ಕೆಲವು ಮಕ್ಕಳ ಪೋಷಕರು ತೀವ್ರವಾಗಿ ವಿರೋಧಿಸುವುದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇದೆ.

0 تعليقات

إرسال تعليق

Post a Comment (0)

أحدث أقدم