ಪುತ್ತೂರು: ಈ ಕನ್ನಡದ ಮಣ್ಣಿನ, ಕನ್ನಡ ನಾಡಿನ ಹೆಮ್ಮೆಯ ಆಭರಣ ಸಂಸ್ಥೆ ಮುಳಿಯ ಜ್ಯುವೆಲ್ಸ್ ಈ ಬಾರಿಯ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡತನವನ್ನು ಬಹಳ ವಿಶೇಷವಾಗಿ ಆಚರಿಸುತ್ತಿದೆ. ಈ ಮೂಲಕ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸುತ್ತಿದೆ.
ಕನ್ನಡ ಭಾವಗೀತಾಭಿನಯ ಹೆಗ್ಗಳಿಕೆಯ ಶ್ರೀಮತಿ ಮಾನಸಿ ಸುಧೀರ್ ಇವರಿಂದ 'ಕನ್ನಡ ಬದುಕು ಬಂಗಾರ' ಎಂಬ ವಿಶೇಷ ಕಾರ್ಯಕ್ರಮವನ್ನು ಮುಳಿಯ ಜ್ಯುವೆಲ್ಸ್ ಆಯೋಜಿಸುತ್ತಿದೆ. ಇದರ ಮುಖಾಂತರ 'ಬೆಳೆಸೋಣ ನಮ್ಮತನ' ಎಂಬ ಸಂದೇಶವನ್ನು ಸಂಸ್ಥೆಯು ಸಾರಲಿದೆ.
ಈ ಕಾರ್ಯಕ್ರಮವು ನವೆಂಬರ್ 10ರಂದು ಬೆಳಿಗ್ಗೆ 10:30ರಿಂದ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರಿನ ನಿಕಟಪೂರ್ವಾಧ್ಯಕ್ಷ ಆಗಿರುವ ಶ್ರೀ ಬಿ ಐತ್ತಪ್ಪ ನಾಯ್ಕ್ ಆಗಮಿಸಲಿದ್ದಾರೆ. ಈ ಕನ್ನಡತನದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ನೀಡಲಾಗಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ