ಕವನ: ಕನ್ನಡದ ಕಹಳೆಯು ಮೊಳಗಲಿ

Upayuktha
0


ಕಣ್ಮನಗಳಿಗೆ ತಂಪನು ಎರೆಯುವ,

ನಮ್ಮೀ ಹೃದಯದಲ್ಲಿ ನಾಡಿನ

ನಾದಸ್ವರವ ನುಡಿಸುವ.

ಅಭಿಮಾನದ ಭಾಷೆಯಿದು,

ಹೆಮ್ಮೆಯ ನಾಡಿದು.


ನಾಡಿನೆಲ್ಲೆಡೆ ಡಿಂಡಿಮವ ಬಾರಿಸುತಾ,

ಕನ್ನಡ ನುಡಿಯ ಸೊಬಗನ್ನು ಪಸರಿಸುತ.

ಸೌಹಾರ್ದತೆಯ ಮೆರೆಯುವ ಮಾಣಿಕ್ಯಧಾರೆಯಲಿ,

ಜ್ಞಾನ ಪೀಠದ ರತ್ನ ನಿನ್ನ ಮುಕುಟದಲ್ಲಿ.


ಬಾದಾಮಿಯ ಪರಂಪರೆಯಿಹುದು ಈ ನೆಲದಲಿ,

ಮೈಸೂರಿನ ವೈಭವದ ಸೊಗಸಿದೆ ಬೀಡಲಿ.

ಹಂಪಿಯ ಸ್ವರ್ಣಯುಗ ಮತ್ತೆ ಬಿಗಡಾಯಿಸಲಿ,

ಕರಾವಳಿಯ ಯಕ್ಷಗಾನದ ಸೊಬಗಲಿ.


ಜೀವನದಿ ಕಾವೇರಿ ಹರಿಯುವ ಸೊಗಸು,

ಜೋಗದ ಸಿರಿಯ ಈ ಸೊಬಗು.

ಹಸಿರು ವನಸಿರಿಯ ಬೀಡು,

ನಮ್ಮೆಲ್ಲರ ಹೆಮ್ಮೆಯ ಕರುನಾಡು.


ಕನ್ನಡವೇ ಎಲ್ಲಾ... ಕನ್ನಡವಿಲ್ಲದೆ ಬೇರೇನೂ ಇಲ್ಲ,

ರಾಜ್ಯೋತ್ಸವದ ದಿನವಾದ್ರೂ ಕನ್ನಡ ಬಳಸೋಣ ಎಲ್ಲಾ.

ಶಾಂತಿ -ಪ್ರೇಮ -ಸಹನೆಯ ನಾಡಿದು,

ಎಲ್ಲರ ಮನದಲ್ಲಿ ನಿರ್ಮಲತೆಯನ್ನು ನೀಡಿದ ಬೀಡಿದು.


ಮೊಳಗಲಿ ಕನ್ನಡದ ಕಹಳೆಯು,

ಉಸಿರಾಗಲಿ ಕನ್ನಡ ಭಾಷೆಯೂ.

ಕನ್ನಡಕ್ಕಾಗಿ ನನ್ನ ಸಾಹಿತ್ಯ ಸೇವೆಯು,

ಕನ್ನಡಾಂಬೆಯ ಪಾದಕೆ ಕೋಟಿ ಕೋಟಿ ನಮನವು.


✍️ ನಾರಾಯಣ. ಕುಂಬ್ರ

ಲ್ಯಾಬ್ ಸಹಾಯಕರು, ರಸಾಯನ ಶಾಸ್ತ್ರ ವಿಭಾಗ,

ವಿವೇಕಾನಂದ ಕಾಲೇಜು, ನೆಹರು ನಗರ, ಪುತ್ತೂರು.

ದ. ಕ.574203.

ಮೊ.ನಂ.8073319717


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




Tags

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top