ಮಂಗಳೂರು: ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ ಪತಂಜಲಿ ಉತ್ಪನ್ನಗಳ ಮಳಿಗೆ ಸುರತ್ಕಲ್ ಇವರ ಸಹಯೋಗದಿಂದ ಬುಧವಾರ (ನ.3) ಸುರತ್ಕಲ್ಲಿನ ಪತಂಜಲಿ ಉತ್ಪನ್ನಗಳ ಮಳಿಗೆಯಲ್ಲಿ ಸಕ್ಷಮದಿಂದ ಗುರುತಿಸಲ್ಪಟ್ಟ ವಿಶೇಷ ಚೇತನರಾದ ವಿಕ್ರಮ್ ಅವರಿಗೆ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮ ನೆರವೇರಿತು.
ಪತಂಜಲಿ ಮಳಿಗೆಯ ಮಾಲಕರಾದ ಶ್ರೀಯುತ ರಮೇಶ್ ಅಂಚನ್ ಜಿ ಅವರು ಸುಮಾರು 12,000 ರೂಪಾಯಿ ಮೊತ್ತದ ಹೊಲಿಗೆ ಯಂತ್ರದ ಧನಸಹಾಯವನ್ನು ನೀಡಿ ಹೊಲಿಗೆ ಯಂತ್ರವನ್ನು ವಿಶೇಷಚೇತನರಾಗಿರುವ ವಿಕ್ರಮ್ ಅವರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸುರತ್ಕಲ್ನ ಸಂಘ ಚಾಲಕರಾದ ಕೃಷ್ಣಮೂರ್ತಿಯವರು ಭಾಗವಹಿಸಿ ಶುಭ ಹಾರೈಸಿದರು.
ಸಕ್ಷಮ ಕರ್ನಾಟಕದ ಕೋಶಾಧಿಕಾರಿ ಜಯದೇವ ಕಾಮತ್, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಕೃಷ್ಣ ಪೂಜಾರಿ, ಕಾರ್ಯದರ್ಶಿ ಹರೀಶ್ ಪ್ರಭು, ಪದಾಧಿಕಾರಿಗಳಾದ ರಾಜಶೇಖರ್ ಭಟ್ ಕಾಕುಂಜೆ, ಮತ್ತು ಅನುಷ ಭಟ್ ಉಪಸ್ಥಿತರಿದ್ದರು. ಸಕ್ಷಮ ಕರ್ನಾಟಕದ ಜಯದೇವ ಕಾಮತ್ ಅವರು ಸಕ್ಷಮದ ಧ್ಯೇಯ ಮತ್ತು ಉದ್ದೇಶಗಳ ಬಗ್ಗೆ ವಿವರಿಸಿ ಧನ್ಯವಾದಗಳನ್ನು ಸಮರ್ಪಿಸಿದರು.