ಕವನ - "ಬೆಳೆ ಬೆಳೆಯೋಣ"

Upayuktha
0 minute read
0


ಚಿನ್ನದಂತ ಬೆಳೆ ಬೇಕಣ್ಣ/ 

ಹೊಟ್ಟೆ ತುಂಬಾ ಉಣ್ಣೋಕೆ

ಮೂಡಣದಿ ಕೆಂಪೇರಿತು / 

ಮೋಡ ಸರಿದು ತಂಪಾಯಿತು

ಗದ್ದೆ ಕಡೆಗೆ ಸಾಗೋಣವೇ ನಾವೀಗಲೇ॥ಚಿ॥


ಚಿನ್ನವನ್ನ ತಿನ್ನಕ್ಕಾಗಲ್ಲ / 

ತಿನ್ನೋದಕ್ಕೇ ಅನ್ನ ಬೇಕಲ್ಲ

ಇದನ್ನರಿತು ಬಾಳಬೇಕ್ರಯ್ಯೋ ಓ ಮನುಜರೇ॥ಚಿ॥


ಹಿಡಿಯೋಣ ಹಾರೆ ನೊಗ / 

ಉಳೋಣ ಗದ್ದೆಯನ್ನೀಗ

ಸಾಲು ಸಾಲಲಿ ಭತ್ತವ ಬಿತ್ರಯ್ಯೋ ಓ ಮನುಜರೇ॥ಚಿ॥


ಮೆತ್ತಿಕೊಂಡರೆ ಕೈ ಮೈ ಕೆಸರು / 

ತಿನ್ನಬಹುದು ನಾವಿನ್ನು ಮೊಸರು

ತಿನ್ನೋಕ್ಕಾಗಲ್ಲ ಧನ-ಚಿನ್ನವನ್ನ ಓ ಮನುಜರೇ॥ಚಿ॥


ಬೆನ್ನು ಬಗ್ಗಿಸಿ ಈಗ ದುಡಿದರೆ / 

ತಿನ್ನಬಹುದು ಅನ್ನವನ್ನು

ಇಲ್ಲವಾದರೆ ಪರದಾಟವೇ ಓ ಮನುಜರೇ॥ಚಿ॥


-ಹರೀಶ್ ಕಜೆ.

ಪುತ್ತೂರು ದ.ಕ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Tags

Post a Comment

0 Comments
Post a Comment (0)
To Top