ಆಕಾಶ ಅದ್ಭುತಗಳ ಆಗರ: ಪ್ರೊ. ರಮೇಶ್ ಭಟ್

Upayuktha
0


ಉಜಿರೆ: ವಿವಿಧ ವಿಸ್ಮಯಗಳಿಗೆ ಆಕಾಶ ಸಾಕ್ಷಿಯಾಗುತ್ತದೆ. ಆಕಾಶದ ಬಗ್ಗೆ ಆಳವಾಗಿ ತಿಳಿಯುತ್ತಾ ಹೋದಂತೆ ಅವು ಸೃಷ್ಟಿಸುವ ಅದ್ಭುತಗಳನ್ನು ತಿಳಿದುಕೊಳ್ಳಬಹುದು ಎಂದು ತಜ್ಞರಾದ ಪ್ರೊಫೆಸರ್ ರಮೇಶ್ ಭಟ್ ಹೇಳಿದರು.


ಅವರು ಉಜಿರೆಯ ಎಸ್‍ಡಿಎಂ ಕಾಲೇಜಿನ ಭೌತಶಾಸ್ತ್ರ ವಿಭಾಗ ಆಯೋಜಿಸಿದ ವಂಡರ್ ಆಫ್ ಸ್ಕೈ ಎಂಬ ವಿಷಯದ ವೆಬಿನಾರ್ ಕಾರ್ಯಕ್ರಮದಲ್ಲಿ ಮಾತನಾಡಿದರು. Upayuktha


ಆಕಾಶವು ನಮ್ಮ ದೃಷ್ಟಿಕೋನದಲ್ಲಿ ಭೂಮಿಯ ಮೇಲ್ಮೈಯ ಮೇಲೆ ಕಾಣುವ ವಾತಾವರಣ. ಸೂರ್ಯ, ಚಂದ್ರ ಮತ್ತು ನಕ್ಷತ್ರ ಮೊದಲಾದವುಗಳನ್ನು ಆಕಾಶದಲ್ಲಿ ಕಾಣಬಹುದು. ದಿನದ ಸಮಯಕ್ಕೆ ಅನುಗುಣವಾಗಿ ಆಕಾಶವು ವಿವಿಧ ಬಣ್ಣಗಳಲ್ಲಿ ಗೋಚರಿಸುತ್ತದೆ. ಮುಂಜಾನೆ ಅಥವಾ ಮುಸ್ಸಂಜೆಯಲ್ಲಿ ಆಕಾಶವು ಕೆಂಪು, ಕಿತ್ತಳೆ, ಹಸಿರು ಮತ್ತು ನೇರಳೆ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಸೂರ್ಯ ಎಷ್ಟು ಮಂದವಾಗಿ ಮತ್ತು ರಾತ್ರಿಗೆ ಎಷ್ಟು ಹತ್ತಿರದಲ್ಲಿದ್ದಾನೆ ಎಂಬುವುದÀನ್ನು ಸೂಚಿಸುತ್ತದೆ. ನೈಸರ್ಗಿಕ ವಿದ್ಯಮಾನಗಳಾದ ಮೋಡ, ಮಳೆ ಬಿಲ್ಲು, ಮುಂಬೆಳಕು, ಮಿಂಚು ಮತ್ತು ಮಳೆಯನ್ನು ಆಕಾಶದಲ್ಲಿ ಕಾಣಬಹುದು. ಇರುಳಿನ ಹೊತ್ತಿನಲ್ಲಿ ಆಕಾಶದ ಸ್ವರೂಪವೇ ಬದಲಾಗಿರುತ್ತದೆ ಎಂದರು.


ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್ಚಂದ್ರ ಎಸ್. ಉಪಸ್ಥಿತರಿದ್ದರು. ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಎಸ್.ಎನ್.ಕಾಕತ್ಕರ್, ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಧ್ಯಾಪಕಿ ನಮ್ರತಾ ಸ್ವಾಗತಿಸಿದರು. ಪ್ರಾಧ್ಯಾಪಕಿ ರಶ್ಮಿ ವಂದಿಸಿದರು.

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top