ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ, ಉದ್ಯೋಗ ಮಾಹಿತಿ ಕೋಶ, IQAC ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಯು.ಎನ್.ಡಿ.ಪಿ ಕೋಡ್ ಉನ್ನತಿ ಇದರ ಸಹಯೋಗದೊಂದಿಗೆ ಕಾಲೇಜಿನಲ್ಲಿ "ಯು.ಎನ್.ಡಿ.ಪಿ ಕೋಡ್ ಉನ್ನತಿ ಪ್ರಾಜೆಕ್ಟ್ ಒರಿಯೆಂಟೇಷನ್" ಎಂಬ ವಿಷಯದಲ್ಲಿ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಕೋಡ್ ಉನ್ನತಿ ಇದರ ತರಬೇತುದಾರರಾದ ಸಯ್ಯದ್ ಅಹ್ಮದ್, ಶ್ರೀಮತಿ ಸ್ವಾತಿ ಶೆಣೈ ಹಾಗೂ ಗಣೇಶ್ ಕುಮಾರ್ ಭಾಗವತ್ ಇವರು ಭಾಗವಹಿಸಿದ್ದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾಡಿದ ಇವರು ಮಹಿಳಾ ಮತ್ತು ಯುವ ಸಮುದಾಯದ ಏಳಿಗೆ, ಉದ್ಯೋಗಾಧಾರಿತ ಕೌಶಲ್ಯಗಳ ಅಭಿವೃದ್ಧಿ, ಪದವಿ ವಿದ್ಯಾರ್ಥಿಗಳಿಗೆ ವಿವಿಧ ಕಾರ್ಯಾಗಾರ, ಗ್ರಾಮೀಣ ಭಾಗದಲ್ಲಿ ಉದ್ಯಮ ಕೇಂದ್ರಗಳ ಸ್ಥಾಪನೆ ಹೀಗೆ ಹಲವಾರು ವಿಷಯಗಳಲ್ಲಿ ಯು.ಎನ್.ಡಿ.ಪಿ ಕೋಡ್ ಉನ್ನತಿ ಇದರ ಕಾರ್ಯ ವೈಖರಿಯನ್ನು ಸಂಕ್ಷಿಪ್ತವಾಗಿ ತಿಳಿಯಪಡಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾದ ಬಾಲಕೃಷ್ಣ ಎಚ್.ಆರ್ ಶುಭಹಾರೈಸಿದರು. ಈ ಕಾರ್ಯಾಗಾರದಲ್ಲಿ ಉದ್ಯೋಗ ಮಾಹಿತಿ ಕೋಶದ ಸಂಚಾಲಕರಾದ ಪ್ರೊ.ಗೀತಾ, ರಾಷ್ಟ್ರೀಯ ಸೇವಾ ಯೋಜನೆಯ ಸಂಚಾಲಕರಾದ ಪ್ರೊ.ಸಂತೋಷ್ ಪ್ರಭು, ಪ್ರೊ,ರಾಜೇಶ್ವರಿ ಎಚ್.ಎಸ್ ಉಪಸ್ಥಿತರಿದ್ದರು.
ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗಣಪತಿ ಭಟ್ ಕುಳಮರ್ವ ಇವರು ಕಾರ್ಯಕ್ರಮದ ಕುರಿತು ಹಿತನುಡಿಗಳನ್ನಾಡಿದರು. ಸೌಜನ್ಯ ಸ್ವಾಗತಿಸಿ ರೂಪ ವಂದಿಸಿದರು. ನವೀನ್ ನಾಯ್ಕ್ ಕಾರ್ಯಕ್ರಮವನ್ನು ನಿರೂಪಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ