ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗ ಹಾಗೂ ‘ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ’, ಮಂಗಳೂರು ಶಾಖೆ ಜಂಟಿ ಆಶ್ರಯದಲ್ಲಿ ಜುಲೈ 30 (ಶುಕ್ರವಾರ) ರಂದು ಬೆಳಗ್ಗೆ 11.30ಕ್ಕೆ “ಜಾಗತಿಕ ಹಿನ್ನೆಲೆಯಲ್ಲಿ ಭಾರತದ ಅರ್ಥವ್ಯವಸ್ಥೆ” ಎಂಬ ವಿಷಯ ಆಧರಿತ ಒಂದು ದಿನದ ರಾಷ್ಟ್ರಮಟ್ಟದ ವೆಬಿನಾರನ್ನು (ಜಾಲಗೋಷ್ಠಿ) ಆಯೋಜಿಸಲಾಗಿದೆ.
ಕೋವಿಡ್-19 ಪಿಡುಗಿನಿಂದ ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಉಂಟಾಗುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸುವ ನಿಟ್ಟಿನಲ್ಲಿ ಭಾರತದ ಪಾತ್ರದ ಕುರಿತು ಅರಿವು ಮೂಡಿಸುವ ಉದ್ದೇಶದೊಂದಿಗೆ ಈ ವೆಬಿನಾರನ್ನು ಹಮ್ಮಿಕೊಳ್ಳಲಾಗಿದೆ. ವೆಬಿನಾರಿನ ಸಮನ್ವಯಕಾರರಾಗಿ ಮಂಗಳೂರಿನ ಖ್ಯಾತ ಲೆಕ್ಕಪರಿಶೋಧಕ ಸಿಎ ಎಸ್.ಎಸ್ ನಾಯಕ್ ಭಾಗವಹಿಸಲಿದ್ದಾರೆ.
ಸಂಪನ್ಮೂಲ ವ್ಯಕ್ತಿಗಳಾಗಿ ವಿಶ್ವಬ್ಯಾಂಕ್ನ ಯೋಜನಾ ಮೇಲ್ವಿಚಾರಕ ಸಿಎ ಗೋಕುಲದಾಸ್ ಪೈ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಕ್ರೆಡಾಯ್ ಕರ್ನಾಟಕ ವಿಭಾಗದ ಉಪಾಧ್ಯಕ್ಷ ಸಿಎ ಡಿ.ಬಿ ಮೆಹ್ತಾ ಭಾಗವಹಿಸಲಿದ್ದಾರೆ. ಐ.ಸಿ.ಎ.ಐ ಮಂಗಳೂರು ಶಾಖೆಯ ಅಧ್ಯಕ್ಷ ಸಿಎ ಕೆ. ಸುಬ್ರಮಣ್ಯ ಕಾಮತ್ ಉಪಸ್ಥಿತರಿರಲಿದ್ದು, ಸಮ್ಮೇಳನದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ ಅನಸೂಯಾ ರೈ ವಹಿಸಲಿದ್ದಾರೆ.
ವೆಬಿನಾರ್ನಲ್ಲಿ ಸ್ನಾತಕ/ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು, ಐ.ಸಿ.ಎ.ಐ ಮಂಗಳೂರು ಶಾಖೆಯ ಸದಸ್ಯರು, ಸಿ.ಎ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು, ಸಂಶೋಧಕರು, ಉಪನ್ಯಾಸಕರು ಹಾಗೂ ಇತರ ಆಸಕ್ತರು ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಸಂಯೋಜಕ ಡಾ.ಜಯವಂತ ನಾಯಕ್ ಇವರನ್ನು ಸಂಪರ್ಕಿಸಬಹುದು, ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ