ಬಾಳೆಕಾಯಿ ಹುಡಿಯಿಂದ ಅಪ್ಪಮ್ ಮತ್ತು ಶಂಕರಪೊಳಿ ಕೂಡ ತಯಾರಿಸಬಹುದು. ಅದರ ಪಾಕವಿಧಾನ ಇಲ್ಲಿದೆ ನೋಡಿ. 'ಬಾಕಾಹು' ಅಭಿಯಾನದ ಪ್ರೇರಕರಾದ ಅಡಿಕೆ ಪತ್ರಿಕೆಯ ಸಂಪಾದಕ ಶ್ರೀಪಡ್ರೆ ಅವರಿಂದ ಪ್ರೇರಣೆ ಪಡೆದು ಈ ಪ್ರಯೋಗವನ್ನು ಮಾಡಿ ಯಶಸ್ವಿಯಾದವರು ಸೌಖ್ಯ ಮೋಹನ್.
ಅಪ್ಪಮ್:
2-3 ಬಾಳೆ ಹಣ್ಣಿಗೆ ಚೂರು ಏಲಕ್ಕಿ, ಉಪ್ಪು, ಸಿಹಿಗೆ ಬೆಲ್ಲ ಹಾಕಿ. ಸ್ವಲ್ಪ ನೀರು ಸೇರಿಸಿ ನುಣ್ಣನೆ ರುಬ್ಬಿ. ಈ ಮಿಶ್ರಣಕ್ಕೆ ಬಾಕಾಹು (ಬಾಳೆಕಾಯಿ ಹುಡಿ/ ಹಿಟ್ಟು) ಸೇರಿಸಿ. ಈ ಹದ ಇಡ್ಲಿ ಹಿಟ್ಟಿನ ಹಾಗಿರಬೇಕು. ಅಪ್ಪಮ್ ಕಾವಲಿಯಲ್ಲಿ ತುಪ್ಪ ಹಾಕಿ ಮಾಡಿ. (ಬೇರೆ ಹಿಟ್ಟು ಸೇರಿಸುವ ಅಗತ್ಯ ಇಲ್ಲ)
ಶಂಕರಪೊಳಿ:
ಬಾಕಾಹುಗೆ ಚೂರು ಉಪ್ಪು, ಎಣ್ಣೆ/ ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ (ನೀರು ಹಾಕದೆ) ಸ್ವಲ್ಪ ಬಿಸಿ ಹಾಲಿಗೆ 1-2 ಚಮಚ ಸಕ್ಕರೆ ಹಾಕಿ ಕರಗಿಸಿ ಬಾಕಾಹು ಮಿಶ್ರಣಕ್ಕೆ ಹಾಕಿ ಚೆನ್ನಾಗಿ ನಾದಿ. ಲಟ್ಟಿಸಿ ಕತ್ತರಿಸಿ ಕರಿಯಿರಿ. (ನೀರು ಹಾಕಿ ಕಲೆಸಿದರೆ ತುದಿ ಒಡೆಯಬಹುದು)
ಪಾಕ, ಪಟ: ಸೌಖ್ಯ ಮೋಹನ್