ಶ್ರೀರಾಮಾಯಣ ಹಕ್ಕಿನೋಟ- ರಾಮಸ್ತುತಿ-7

Upayuktha
0


 


ರಾಮನಾಮ ಜಪಿಸಿ ಜಪಿಸಿ

ಬೇಡ ಬೇಕಾದನು|

ಕಥೆಯ ಕೊಟ್ಟು ವ್ಯಥೆಯ ಕಳೆದು

ತಾನು ಅಮರನಾದನು||


ರಾಮಗಾಗಿ ಕಾದ ಪತಿತೆ

ಆದಳು ಪುನೀತೆಯು|

ಪಾಪ ಕಳೆವ ಬಗೆಯ ತೋರಿ

ಆದಳು ಪತಿವ್ರತೆ||


ಮಾನಕಾಗಿ ಹರಣ ತೆತ್ತ

ಹದ್ದು ಸಗ್ಗ ಸೇರಿತು|

ಮರಣದಲ್ಲು ಸಾರ್ಥಕತೆಯ

ಮೆರೆದು ಧನ್ಯವಾಯಿತು||


ರಾಮಗಾಗಿ ಸೀತೆಗಾಗಿ

ಕಡಲು ಹಾರಿದಾ ಕಪಿ|

ನ್ಯಾಯಕಾಗಿ  ಬದುಕಬೇಕು

ಎಂಬ ಪಾಠ ಹೇಳಿತು||


ಅಧರ್ಮಿ ಅಣ್ಣನನ್ನು ತೊರೆದ

ಧರ್ಮಿ ತಮ್ಮನುಳಿದನು|

ರಾಮಗಾಗಿ ಬಾಳಿದವರು

ರಾಮನೊಡನೆ ಉಳಿದರು||


ರಾಮನಾಳಿದೆಲ್ಲರನ್ನು

ಅಳುವ ಅಳಿಸಿ ನಗಿಸುತ|

ರಾಮನುಳಿದ ಎಲ್ಲರಲ್ಲು

ರಾಮದೇವರಾಗುತ||


-ವಿಶ್ವ

(U S Vishweshwara Bhat)

ಚಿತ್ರ: ವಿದ್ಯಾರ್ಥಿವಾಹಿನೀ- ಹವ್ಯಕ ಮಹಾಮಂಡಲ

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




Tags

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top