ನಂಜನಗೂಡು ರಸಬಾಳೆ ಕಾಯಿ ಬಳಸಿ ಚಂದುರಾಯನಹಳ್ಳಿಯಲ್ಲಿರುವ ರಾಮನಗರ ಕೇವೀಕೆಯವರು ಬಾಕಾಹು (ಬಾಳೆಕಾಯಿ ಹುಡಿ / ಹಿಟ್ಟು) ಮೊದಲ ಬಾರಿಗೆ ಉತ್ಪಾದಿಸಿ ಅಧ್ಯಯನ ಮಾಡುತ್ತಿದ್ದಾರೆ. ಈ ನಡುವೆ ಸುತ್ತಮುತ್ತಲಿನ ಕೆಲವು ರೈತರೂ ಬಾಳೆಕಾಯಿ ಹುಡಿ ತಯಾರಿಯಲ್ಲಿ ಆಸಕ್ತಿ ತೋರಿಸುತ್ತಿದ್ದಾರಂತೆ.
ನಿಕಟ ಭವಿಷ್ಯದಲ್ಲಿ ನಡೆಸಲಿರುವ ರೈತರ ಸಭೆಗಳಲ್ಲಿ ಬಾಕಾಹು ತಯಾರಿಯ ಪ್ರಾತ್ಯಕ್ಷಿಕೆಯನ್ನೂ ಅಳವಡಿಸಿಕೊಳ್ಳುತ್ತೇವೆ ಎನ್ನುತ್ತಾರೆ ಈ ಕೇವೀಕೆಯ ಗೃಹ ವಿಜ್ಞಾನ ವಿಶೇಷಜ್ಞೆ ಡಾ. ಲತಾ ಆರ್. ಕುಲಕರ್ಣಿ.
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
Key Words: Banana flour, Banana Powder, Bakahu, ಬಾಕಾಹು, ಬಾಳೆಕಾಯಿ ಹುಡಿ, ಬಾಕಾಹು ಆಂದೋಲನ, ರಾಮನಗರ,
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ