"ಈ ಪರೀಕ್ಷೆ ಮತ್ತು ಫಲಿತಾಂಶ ನನಗೆ ತೃಪ್ತಿ ನೀಡಿಲ್ಲ" ಅನ್ನುವ ಮಾತು 600 ರಲ್ಲಿ 600 ಅಂಕಗಳನ್ನು ಪಡೆದ ಪ್ರಿಯಾಂಕಳಿಂದ ಕೇಳಿದ ಮೇಲೆ ದ್ವಿತೀಯ ಪಿ.ಯು.ಸಿ. ಫಲಿತಾಂಶದ ಕುರಿತಾಗಿ ಎರಡು ಮಾತನಾಡಬೇಕೆಂಬ ಮನಸ್ಸಾಗಿದೆ. ಕೊರೊನದ ಕರಿ ಛಾಯೆಯಲ್ಲಿ ಜೀವವನ್ನೆ ಒತ್ತೆ ಇಟ್ಟು ನಡೆದ ಪರೀಕ್ಷೆ ಅನ್ನುವುದು ಜಗತ್ತಿಗೆ ತಿಳಿದ ವಿಷಯ. ಪರೀಕ್ಷೆ ಅಂದರೆ ಹಿಂದೆ ಗಳಿಸಿದ ಅಂಕಗಳ ಜೇೂಡಣೆಯೊಂದಿಗೆ ಆಯಾಯ ಕಾಲೇಜಿನ ಒಳಗೆ ಅವರದ್ದೆ ವಿದ್ಯಾರ್ಥಿಗಳನ್ನು ಅವರದ್ದೆ ಉಪನ್ಯಾಸಕರು ಪರೀಕ್ಷಿಸಿ ಪಾಸು ಮಾಡಿದ ಫಲಿತಾಂಶ. ಹಾಗಾಗಿ 2020-21ರ ಪಿ.ಯು.ಸಿ. ಫಲಿತಾಂಶ ಹೊಸ ದಾಖಲೆಗಳೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ವಿಶ್ವ ದಾಖಲೆಯನ್ನು ಸೃಷ್ಟಿ ಮಾಡಿದೆ. ಹಿಂದೆಯೂ ಇಲ್ಲದ ಮುಂದೆಯೂ ಸಾಧ್ಯವಾಗದ ದಾಖಲೆಗಳ ಸ್ಥೂಲ ಪರಿಚಯ ಇಲ್ಲಿದೆ.
1. ಈ ಬಾರಿ 2239 ವಿದ್ಯಾರ್ಥಿಗಳಿಗೆ 600ರಲ್ಲಿ 600 ಅಂಕಗಳು. ಈ ಹಿಂದಿನ ವಾಷಿ೯ಕ ಪರೀಕ್ಷೆಗಳಲ್ಲಿ 600ರಲ್ಲಿ 600 ಅಂಕ ಗಳಿಸಿರುವ ವಿದ್ಯಾರ್ಥಿಗಳ ಅಂಕೆ ಕೇವಲ 5 ರಿಂದ 10 ಒಳಗೆ ಇತ್ತು.
2. ಈ ಬಾರಿ ಪರೀಕ್ಷೆಗೆ ನೊಂದಣಿ ಮಾಡಿಕೊಂಡ ವಿದ್ಯಾರ್ಥಿಗಳ ಸಂಖ್ಯೆ 666497. ಇದರಲ್ಲಿ ಕೇವಲ 7 ವಿದ್ಯಾರ್ಥಿಗಳ ಫಲಿತಾಂಶ ತಾಂತ್ರಿಕ ಕಾರಣಕ್ಕಾಗಿ ತಡೆಹಿಡಿಯಲಾಗಿದೆ. ಅಂದ್ರೆ ನಾಳೆ ಅದೂ ಕೂಡಾ ಸರಿಮಾಡಲೇಬೇಕು. ಅಗತ್ಯ ಕೂಡಾ. ಈ ಹಿಂದಿನ ವಾಷಿ೯ಕ ಪರೀಕ್ಷೆಗಳ ಒಟ್ಟುರಾಜ್ಯ ಮಟ್ಟದ ಫಲಿತಾಂಶ ಹರ ಹರಾ. 70 ದಾಟ್ಟುತ್ತಿರಲಿಲ್ಲ.
ಈ ಕೊರೋನಾ ಸಂದರ್ಭದಲ್ಲಿ ಯಾವುದೇ ನಿರ್ದಿಷ್ಟ ಮಾಪನವಿಲ್ಲದೆ ಆಯಾಯ ಕಾಲೇಜುಗಳ ಉಪನ್ಯಾಸಕರನ್ನೇ 'ಗುರುಭ್ಯೋ ನಮಃ' ಎಂದು ನಂಬಿ ಆಯಾಯ ಕಾಲೇಜುಗಳು ನೀಡಿದ ಫಲಿತಾಂಶವನ್ನು ಕೆೈಯಲ್ಲಿ ಹಿಡಿದು ಪದವಿಪೂರ್ವ ಶಿಕ್ಷಣ ಇಲಾಖೆ ಪತ್ರಿಕಾಗೇೂಷ್ಠಿ ನಡೆಸಿ ಈ ಹೊಸ ವಿಶ್ವ ದಾಖಲೆಯನ್ನು ಪ್ರಕಟಪಡಿಸುವ ಅಗತ್ಯ ಇತ್ತೆ? ಇದೊಂದು abnormal ಪರಿಸ್ಥಿತಿಯಲ್ಲಿ ನಡೆದ ಪರೀಕ್ಷೆ ಹಾಗಾಗಿ ಅದನ್ನು ಅದೇ ರೀತಿಯಲ್ಲಿ ತೆಗೆದುಕೊಳ್ಳಬೇಕು ಬಿಟ್ಟರೆ ನಮ್ಮ ವಿದ್ಯಾರ್ಥಿಗಳು ಎಷ್ಟೇ ಎಷ್ಟು ಸಾಧನೆ ಮಾಡಿದ್ದಾರೆ? ಯಾವ ಜಿಲ್ಲೆ ಯಾವ ಸ್ಥಾನದಲ್ಲಿ ನಿಂತಿದೆ? ಇದನ್ನೆಲ್ಲಾ ಆವಲೇೂಕಿಸ ಬೇಕಾದ ಪರೀಕ್ಷೆಯೂ ಇದಾಗಿರಲಿಲ್ಲ. ಮಾತ್ರವಲ್ಲ ಪರೀಕ್ಷೆ ಬರೆದೇ ಪಾಸಾಗುತ್ತೇನೆ ಅನ್ನುವ ಪ್ರತಿಭಾವಂತ ಹಾಗೂ ಸಾಮಾನ್ಯ ವಿದ್ಯಾರ್ಥಿಗಳ ನಿಜವಾದ ಮೌಲ್ಯ ಮಾಪನವೂ ಇದಾಗಿರಲಿಲ್ಲ ಅನ್ನುವುದು ಫಲಿತಾಂಶವೇ ಎತ್ತಿ ತೇೂರಿಸುವಂತ್ತಿದೆ.
ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗಬಾರದು ಅನ್ನುವ ಮಾನವೀಯತೆಯ ನೆಲೆಯಲ್ಲಿ ಪ್ರಕಟಸಿದ ಫಲಿತಾಂಶ ಬಿಟ್ಟರೆ ದಾಖಲೆಗಳನ್ನು ಘೇೂಷಿಸುವ ಸಂದರ್ಭ ಇದಾಗಿರಲಿಲ್ಲ ಅನ್ನುವುದು ನನ್ನ ಅನಿಸಿಕೆ.
ಈಗ ಈ ಫಲಿತಾಂಶ ಬಂದ ಮೇಲಿನ ಪೆೈಪೇೂಟಿ ನೇೂಡಿ ರಾಜ್ಯದಲ್ಲಿಯೇ ದ.ಕ.ಪ್ರಥಮ ಉಡುಪಿ ನಾಲ್ಕನೇ ಸ್ಥಾನ. ನಮ್ಮಲ್ಲಿ ಕಾಲೇಜಿನ ಅದೆಷ್ಟೊ ಮಂದಿ ವಿದ್ಯಾರ್ಥಿಗಳು 600ಕ್ಕೆ 600, ಜಿಲ್ಲೆಯಲ್ಲಿ ನಾವೇ ಪ್ರಥಮ, ಶೇ 100 ದಾಖಲೆ. ಪಾಪ ಪ್ರಾಮಾಣಿಕವಾಗಿ ಪ್ರತಿಭೆಗೆ ತಕ್ಕಂತೆ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿದ ಕಾಲೇಜುಗಳಿಗೆ, ಮೇಷ್ಟ್ರುಗಳಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಸಂಪೂರ್ಣವಾಗಿ ಮನಸ್ಸಿಗೆ ತೃಪ್ತಿ ನೀಡದ, ಅರಗಿಸಿಕೊಳ್ಳಲಾರದ ಸಾಂದರ್ಭಿಕ ಪರೀಕ್ಷೆ ಅನ್ನುವುದರಲ್ಲಿ ಎರಡು ಮಾತಿಲ್ಲ.
-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ