ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿ ಮುಂದುವರಿಯುತ್ತಾರೋ, ರಾಜೀನಾಮೆ ನೀಡುತ್ತಾರೋ? ಎಂಬ ಉಹಾಪೊಹಗಳಿಗೆ ಒಂದು ತಾರ್ಕಿಕವಾದ ಅಂತಿಮ ನಿರ್ಧಾರ ಹೊರಬಿದ್ದಂತಿದೆ. ಅದೇನೆಂದರೆ ಮುಖ್ಯಮಂತ್ರಿ ಯಡಿಯೂರಪ್ಪನವರು ಇದೇ 26ನೇ ತಾರೀಖಿನಂದು ರಾಜೀನಾಮೆ ನೀಡಲಿದ್ದಾರೆ ಅನ್ನುವ ಸುದ್ದಿ ಬಲ್ಲಮೂಲಗಳಿಂದ ಖಚಿತವಾಗುತ್ತಿರುವುದಂತೂ ಸತ್ಯ. ಇದಕ್ಕೂ ರಾಜಾ ಹುಲಿ ಯಡಿಯೂರಪ್ಪನವರು ಮಾನಸಿಕವಾಗಿ ಸಜ್ಜಾಗಿರುವುದು ಕೂಡಾ ಅವರ ಮಾತಿನ ಧ್ವನಿಯಲ್ಲಿಯೇ ಎದ್ದು ಕಾಣುತ್ತಿದೆ.
ಈಗ ಕರ್ನಾಟಕದ ಜನತೆಯ ಮುಂದಿರುವ ಬಹು ದೊಡ್ಡ ಕುತೂಹಲದ ನಿರೀಕ್ಷೆ ಅಂದರೆ ಕನ್ನಡ ನಾಡಿನ ರಾಜಾಹುಲಿ ಎಂದೇ ಖ್ಯಾತರಾದ ಯಡಿಯೂರಪ್ಪನವರ ಮುಂದಿನ ಹೆಜ್ಜೆ ಹೇಗಿರಬಹುದು? ಅನ್ನುವುದೇ ಬಹುಚರ್ಚಿತ ವಿಚಾರ.
ಇದುವರೆಗೆ ಯಡಿಯೂರಪ್ಪನವರು ತಮಗಾದ ನೇೂವನ್ನು ಯಾರ ಮುಂದು ಯಾವ ಸಂದರ್ಭದಲ್ಲೂ ಕೂಡಾ ಹೊರಗೆ ತೇೂರಿಸಿ ಕೊಳ್ಳಲೇಇಲ್ಲ. ಅಂದರೆ ಅವರಿಗಾದ ನೇೂವು ತಮ್ಮ ಮನಸ್ಸಿನೊಳಗೆ ತುಂಬಿ ಕೊಂಡು ಮುಖ್ಯಮಂತ್ರಿ ಅನ್ನುವುದನ್ನು ಮರೆಯದೆ ಕಾಯ೯ಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ; ಮಾಧ್ಯಮದವರನ್ನು ಕೂಡಾ ಅಷ್ಟೇ ಸಲಿಸಾಗಿ ಎದುರಿಸುತ್ತಿದ್ದಾರೆ. ಅವರು ಎಲ್ಲಿಯೂ ಕೂಡಾ ತಾನು 26ಕ್ಕೆ ರಾಜಿನಾಮೆ ನೀಡುತ್ತೇನೆ ಅನ್ನುವುದನ್ನು ಹೇಳೊಲ್ಲ ಮಾತ್ರವಲ್ಲ ಕೊಡುವುದಿಲ್ಲ ಅನ್ನುವುದನ್ನು ಕೂಡಾ ಹೇಳುವುದಿಲ್ಲ. ಇದು ರಾಜ ಹುಲಿಯ ಗಂಭೀರದ ಆಶ್ಚರ್ಯದ ನಡೆಯೂ ಹೌದು. ಎಲ್ಲದಕ್ಕೂ ರಾಷ್ಟೀಯ ನಾಯಕರುಗಳ ತೀಮಾ೯ನಕ್ಕೆ ಬಿಟ್ಟಿದ್ದೇನೆ ಅನ್ನುವ ಮಾತು ಅವರ ಮುಂದಿನ ನಡಿಗೆಯ ಹೆಜ್ಜೆಯನ್ನು ಇನ್ನಷ್ಟು ಕೌತುಕಮಯ ಮಾಡಿದೆ ಅನ್ನುವುದು ಅಷ್ಟೇ ಸ್ವಷ್ಟ.
ಹಾಗಾದರೆ ಮುಖ್ಯಮಂತ್ರಿ ಸ್ಥಾನ ಕಳಚಿ ಕೊಂಡ ರಾಜಾಹುಲಿ ಯಡಿಯೂರಪ್ಪ ಸರ್ಕಾರ ಎಂಬ ಬೇೂನಿನಿಂದ ಹೊರಗೆ ಬಂದ ಮೇಲೆ ಅವರ ನಡೆ ನುಡಿ ಘರ್ಜನೆ ಹೇಗಿರಬಹುದು? ಇದು ಖಂಡಿತವಾಗಿಯೂ ಅಪಾಯದ ಹುಲಿ ಅನ್ನುವುದು ಹೈಕಮಾಂಡಿಗೆ ಮೊದಲೇ ತಿಳಿದಿದೆ ಹಾಗಾಗಿ ಯಾವುದಾರೂ ಒಂದು ಪಂಜರದಲ್ಲಿ ಕಟ್ಟಿ ಹಾಕಿ ಘರ್ಜಿಸದ ಹಾಗೇ ನೇೂಡಿ ಕೊಳ್ಳ ಬೇಕೆಂಬ ತಂತ್ರಗಾರಿಕೆ ಬಿಜೆಪಿಯ ಉನ್ನತ ಮಟ್ಟದಲ್ಲಿ ನಡೆಯುತ್ತಿರುವುದು ಅಷ್ಟೇ ಸತ್ಯ. ಘರ್ಜಿಸಲಾಗದ ಚಿನ್ನದ ಪಂಜರ ನನಗೆ ಬೇಡ. ಇದರ ಬದಲಿಗೆ ತಾನು ನಿರುಮ್ಮಳವಾಗಿ ಕಾಡಿನಲ್ಲಿ ಸುತ್ತಾಡಿಕೊಂಡಿರುತ್ತೇನೆ ಅನ್ನುವ ಮನದ ನಿರ್ಧಾರವನ್ನು ಇದಾಗಲೇ ರಾಜಾಹುಲಿ ತೆಗೆದುಕೊಂಡ ಹಾಗಿದೆ.
ಆದರೂ ಹೈಕಮಾಂಡಿಗೂ ತಿಳಿದಿದೆ ಹುಲಿಗೆ ಪ್ರಾಯವಾಗಿದೆ. ಹಾಗಾಗಿ ಪ್ರತಿಷ್ಠೆಯನ್ನು ಬದಿಗಿಟ್ಟು ತನ್ನ ಮರಿಗಳ ಸುರಕ್ಷತೆಗಾಗಿಯಾದರೂ ಬಾಲ ಮಡಚಿ ಕುಳಿತು ಕೊಳ್ಳಬಹುದು ಅನ್ನುವ ಆಲೇೂಚನೆ ಬಿಜೆಪಿ ಉನ್ನತ ನಾಯಕರುಗಳದ್ದು. ಆದರೆ ಅದು ಅವರು ಎಣಿಸಿದಷ್ಟು ಸುಲಭವಲ್ಲ.
ಅಂದರೆ ಪೆಟ್ಟು ತಿಂದ ಹುಲಿ ಕಾಡಿನಲ್ಲಿ ಸ್ವಚ್ಛಂದವಾಗಿ ತಿರುಗಿಕೊಂಡು ಬೇಕಾದಲ್ಲಿ ಬೇಟೆಯಾಡಿಕೊಂಡು ದ್ರೇೂಹ ಬಗೆದವರಿಗೆ ಪೆಟ್ಟಿನ ರುಚಿ ತೇೂರಿಸಿ ತನ್ನ ಇರುವಿಕೆಯನ್ನು ಮತ್ತೆ ಮತ್ತೆ ಪರಿಚಯಿಸುವ ಕಾರ್ಯತಂತ್ರದಲ್ಲಿ ರಾಜಾಹುಲಿ ಮುಖ್ಯಮಂತ್ರಿ ಪಂಜರದಿಂದ ವಿರಮಿಸುವ ಎಲ್ಲಾ ಲಕ್ಷಣಗಳು ಗೇೂಚರಿಸುತ್ತಿದೆ.
ಒಂದಂತೂ ಸತ್ಯ ಹಲ್ಲು ಕಿತ್ತ ಹುಲಿಯನ್ನು ಮಡಿಲಲ್ಲಿ ಮಲಗಿಸಿಕೊಂಡು ನಿದ್ದೆ ಮಾಡುತ್ತೇನೆ ಅನ್ನುವ ಮುಂದಿನ ಮುಖ್ಯಮಂತ್ರಿಗಳಿಗೆ ಮತ್ತು ಹಲ್ಲು ಕೀಳಲು ತೆರೆ ಮರೆಯಲ್ಲಿ ಆಟವಾಡಿದವರಿಗೆ ಸುಖ ನಿದ್ರೆ ಮಾಡಲು ಹಳೆ ಹುಲಿ ಖಂಡಿತವಾಗಿಯೂ ಬಿಡಲಿಕ್ಕಿಲ್ಲ ಅನ್ನುವುದು ಅಷ್ಟೇ ನಿಜ.
=>ಒಂದು ವೇಳೆ ಅಂದಿನ ಯಡಿಯೂರಪ್ಪ ಇಂದಾಗಿದ್ದರೆ ಬಿಜೆಪಿ ಯನ್ನು ತುದಿಗಾಲಿನಲ್ಲಿ ನಿಲ್ಲಿಸುವ ಅವಕಾಶ ಇಂದು ಸಾಕಷ್ಟು ಇತ್ತು.ಅದು ಹೇಗೆ ನೇೂಡಿ.>ಒಂದು ವೇಳೆ ಯಡಿಯೂರಪ್ಪನವರೇ ರಾಜೀನಾಮೆ ಕೊಡಿ ಅಂದು ಬಿಜೆಪಿ ಹೆೈಕಮಾಂಡ್ ಹೇಳಿದಾಗ ಇಲ್ಲ ನಾನು ಕೊಡುವುದಿಲ್ಲ..ನನಗೆ ಸದನದಲ್ಲಿ ಬಹುಮತವಿದೆ ಸಾಬೀತು ಪಡಿಸುತ್ತೇನೆ ಅಂದ್ರೆ ಇಂದಿನ ಪರಿಸ್ಥಿತಿಯಲ್ಲಿ ಯಡಿಯೂರಪ್ಪನವರನ್ನು ಬೆಂಬಲಿಸುವ ಬಿಜೆಪಿಯನ್ನು ಮಣಿಸ ಬೇಕೆಂಬ ಕಾಂಗ್ರೆಸ್ ಇದೆ. ಜೆಡಿಎಸ್ ಇದೆ. ಮಾತ್ರವಲ್ಲ ಸಾಕಷ್ಟು ಲಿಂಗಾಯಿತ ಶಾಸಕರು ಇದ್ದಾರೆ. ಜೊತೆಗೆ ಅವರದ್ದೇ ಮಿತ್ರ ಮಂಡಳಿಯೂ ಇದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಪರಿಸ್ಥಿತಿ ಏನಾಗ ಬಹುದು ಊಹಿಸಿ?
ಆದರೆ ಈ ಪರಿಸ್ಥಿತಿಯಲ್ಲಿ ಇಂದಿನ ಯಡಿಯೂರಪ್ಪ ಹಾಗೇ ಮಾಡಲು ತಯಾರಿಲ್ಲ. ಇದಕ್ಕೆ ಬಹು ಮುಖ್ಯ ಕಾರಣ ಇದು ಯಡಿಯೂರಪ್ಪನವರಿಗೆ ರಾಜಕೀಯ ಪ್ರಯೇೂಗ ಮಾಡುವ ಪ್ರಾಯವೂ ಅಲ್ಲ ಮಾತ್ರವಲ್ಲ ಜೊತೆಗೆ ಪುತ್ರ ವಾತ್ಸಲ್ಯವೂ ಅವರನ್ನು ಪಕ್ಷದ ಒಳಗೆ ಬಂಧಿಸಿ ಬಿಟ್ಟಿದೆ ಅಂದರೂ ತಪ್ಪಾಗಲಾರದು.
ಯಡಿಯೂರಪ್ಪನವರ ಬಗ್ಗೆ ಯಾರು ಏನೇ ಹೇಳಲಿ ಒಂದಂತೂ ಸತ್ಯ ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಅದರಲ್ಲೂ ಕರುನಾಡಿನಲ್ಲಿ ನೆಲೆ ಕಾಣುವಂತೆ, ಅಧಿಕಾರ ಹಿಡಿಯುವಂತೆ ಮಾಡಿದ್ದರೆ ಅದು ಈ ರಾಜಾ ಹುಲಿ ಅನ್ನುವುದರಲ್ಲಿ ಎರಡು ಮಾತಿಲ್ಲ. ಬಿಜೆಪಿಗೆ ರಾಜ್ಯದಲ್ಲಿ ಸರಕಾರ ಬೇಕು ಅನ್ನುವಾಗ ಇದೇ ಯಡಿಯೂರಪ್ಪನವರನ್ನು ಬಳಸಿಕೊಂಡು ಅಧಿಕಾರ ಹಿಡಿದಿದ್ದಾರೆ. ಅದೇ ಪಕ್ಷ ಗಟ್ಟಿಯಾಯಿತು ಅನ್ನುವಾಗ ಭ್ರಷ್ಟಾಚಾರ ನೈತಿಕತೆ ಎಲ್ಲವೂ ನೆನಪಾಗಿ ಅಧಿಕಾರ ಮುಗಿಯಲು ಒಂದು ವರ್ಷ ಒಂಭತ್ತು ತಿಂಗಳು ಇರುವಾಗಲೇ ಹೆತ್ತು ಹೊತ್ತ ತಾಯಿಯನ್ನೇ ಮರೆಯುತ್ತೀರಿ ಅಂದರೆ ಇದು ನ್ಯಾಯವೇ ಅನ್ನುವ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಬೇರೆ ಪಕ್ಷಗಳಿಂದ ಚುನಾಯಿತ ಶಾಸಕರನ್ನು ಕದ್ದು ತಂದು ಸರಕಾರ ಕಟ್ಟುವಾಗ ಈ ಭ್ರಷ್ಟಾಚಾರ ಅನೈತಿಕತೆಯ ನೆನಪಾಗಲಿಲ್ಲವೇ? ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಇಚ್ಛೆ ಇದ್ದರೆ ಇದಕ್ಕೆಲ್ಲ ಉತ್ತರಿಸಬೇಕಾದ ಜವಾಬ್ದಾರಿ ಬಿಜೆಪಿಯ ಮುಂದಿದೆ. ಅಲ್ವೇ?
ವಿಶ್ಲೇಷಣೆ: ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
Key Words: BS Yediyurappa, Karnataka Politics, BJP, ಬಿಜೆಪಿ, ಬಿ.ಎಸ್ ಯಡಿಯೂರಪ್ಪ, ಕರ್ನಾಟಕ ರಾಜಕೀಯ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ