ಬದುಕು
ಸುಖಮಯ
ದು:ಖಮಯ...
ವಾಸ್ತವ ವಿಷಯ !
ಕೆಲವರು...
ಗೋಳಾಡುವರು..
ಹಲವರು...
ತೇಲಾಡುವರು !
ಬದುಕು ನಮಗೆ
ವಿಧಿಯ ಕೊಡುಗೆ-
ಎಂಬ ಭಾವವೇ ಇಲ್ಲ..
ಇತರರ ಬದುಕಿಗೆ
ಮುಳ್ಳಾಗಿ ಕಾಡುವುದ
ಬಿಡಲೇ ಇಲ್ಲ....!
ಎಲ್ಲವೂ ನನ್ನದೆ.
ನನಗೇ ಎಲ್ಲ....
ದುರಾಸೆ ಬಿಟ್ಟಿಲ್ಲ...!
ಹೌದು ವಿಧಿ-
ಬೀಸುತ್ತಿದೆ...
ಚಾಟಿಯೇಟು...
ದಪ್ಪ ಚರ್ಮದ ನಮಗೆ
ತಾಗೀತೇ ಪೆಟ್ಟು ?
ಬದುಕ ಅನುಭವಿಸ ಬೇಕು
ಬದುಕಲು ಬಿಡ ಬೇಕು !!!
-ನಾರಾಯಣ ರೈ ಕುಕ್ಕುವಳ್ಳಿ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ