ಮುದ್ದಣನ ಕಾವ್ಯದಲ್ಲಿ ಗಣಪತಿ ಸ್ತುತಿ

Upayuktha
0



ವಿದ್ಯೆ ವಾರಿಧಿಯಾದ ಗಣಪನು ಮತಿಗೆ ಮಂಗಳವನ್ನುಂಟು ಮಾಡುವವನಾಗಿದ್ದಾನೆ. ನಂದಳಿಕೆಯ ಲಕ್ಷ್ಮೀನಾರಾಯಣಯ್ಯ ಮುದ್ದಣ ಎಂಬ ಹೆಸರಿನಿಂದ ಪ್ರಸಿದ್ಧನಾದ ಕವಿ. ಆತನ ಯಕ್ಷಗಾನ ರತ್ನಾವತೀ ಕಲ್ಯಾಣದಲ್ಲಿ ಆರಂಭದಲ್ಲಿ ಗಣೇಶ ಸ್ತುತಿ ಬರುತ್ತದೆ.


ಜಯತು ಜಯಗಣನಾಥ |

ಜಯತು ಆಖುವರೂಥಾ

ಜಯತು ಲೋಕ ವಿಖ್ಯಾತ|

ವಿಘ್ನ ವಿಪಿನ ಕುಠಾರ

ವಿಘಾದಿಕಲುಷಹರ |

ವಿಘ್ನಕರಾ ಧೀರ 

ಕರಿವದನ ಹರಪುತ್ರ |

ಶರಣಜನನುತಿ ಪಾತ್ರ 

ಸುರವಿನುತ ಸುಚರಿತ್ರ |

ಪರತರ ಪವಿತ್ರ


ಮುದ್ದಣನ ಕುಮಾರ ವಿಜಯ ಯಕ್ಷಗಾನದಲ್ಲಿಯೂ ಗಣಪತಿಯ ವರ್ಣನೆ ಬರುತ್ತದೆ.


ಜಯ ಜಯ ಗಣಗಣನಾಯಕ |

ಜಯ ಜಯ ಮಂಗಳದಾಯಕ 

ಜಯ ಜಯ ವಿಘ್ನ ನಿವಾರಕ |

ಜಯ ಜಯ ಸಿರಿ ಬೆನಕ 

ಶಂಕರ ಸುತ ಶಂಕರ |

ಮಂ ಕುಡು ಕೂರ್ಮೆಯೊಳನುದಿನ 

ಬಿಂಕಣಗಿವಿಯನೆ ಪಾಲಿಪು |

ದಂಕುಶಧರ ದಯದಿ 

ಲಂಬೋದರ ನಂಬಿದೆ ಪಾ|

ದಾಂಬುಜದೊಳು ಬಿಂಗಕ್ಕುವೆ

ನಂಬಿಕೆಯಣುಗನ ಪೊರೆ ಹೇ|

ರಂಬನೆ ಸಂಭ್ರಮದಿ ಜಯ ಜಯ

ಮಂಗಳದಾಯಕ, ವಿಘ್ನ ನಿವಾರಕ ಪೊರೆಯ ಬೇಕು- ಎಂಬ ಮೊರೆ ಇದೆ.


ಕನಕದಾಸರ ಮೋಹನ ತರಂಗಿಣಿ ಕಾವ್ಯವು ಇದೀಗ ತುಳು ಭಾಷೆಯಲ್ಲೂ ಅನುವಾದಗೊಂಡು ಬಂದಿದೆ. ಇಲ್ಲಿ ಗಣೇಶನ ಸ್ತುತಿ ಹೀಗೆ ವರ್ಣಿತವಾಗಿದೆ.


ಓ ಬಂಗಾರ್ ಬೂಮಿದ ವಿನಾಯಕ

ನಿನ್ನ ಕಜ್ಜೊ ಯೇಪೊಲ ನಿರ್ವಿಘ್ನ 

ಲೋಕೊದೊಡೆಯೆಯಾಯಿ

ಯೀಯೆಂಕ್ಲೆಗೆಡ್ಡೆ ಮತಿ ಕೊರುದು ಕಾಪುಲ


ಗಣಪತಿ ಜ್ಞಾನದ ಸಂಕೀರ್ಣ ಸ್ವರೂಪದ ಸಂಕೇತ. ಅವನು ಸರ್ವರಿಗೂ ಸನ್ಮಂಗಲವನ್ನುಂಟು ಮಾಡಲೆಂದು ಹಾರೈಸೋಣ.


- ಕೃಷ್ಣಮೂರ್ತಿ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top