ಜೀವನ ಸಾರ ಸಾರಿದ ಸಾರಥಿ
ಬದುಕ ಪಾಠ ತಿಳಿಸಿದ ಮಹಾರಥಿ
ರಾಧೇಯ ಮನದಲ್ಲಿ ನೆಲೆಸಿದ ಅತಿರಥಿ
ಜನಿಸಿದ ಪುಣ್ಯದಿನ ಅಷ್ಟಮಿ ತಿಥಿ
ದೇವಕಿ ಬಸಿರಲಿ ಜನಿಸಿದ ನಂದನ
ಯಶೋದೆಯನ್ನು ತಾಯಿ ಎಂದ
ಗೋಕುಲದಲ್ಲಿ ಯದುನಂದನ
ಕಳೆದನು ಬಾಲ್ಯದ ದಿನಗಳ ಚಂದ
ಹೆಜ್ಜೆ- ಹೆಜ್ಜೆಗೂ ತೋರಿದನು ಮಾಯೆ
ಧರ್ಮವು ನಲಿಯುತಲಿ ನೆಲೆಯಾಗಲೆಂದು
ಸರ್ವರ ಮನದಲಿ ಕೃಷ್ಣನ ಛಾಯೆ
ಮೂಡಿತು ಕರ್ಮ ಮಾರ್ಗವೆಂದು
ಲೋಕವೇ ದೇವರೆಂದು ಕರೆಯಲು
ತಿಳಿಸಿದ ಕರ್ಮಫಲ ಯಾರನ್ನು ಬಿಡದೆಂದನು
ಜಗತ್ತು ಜಗನಾಥನೆಂದು ಕರೆಯಲು
ವಿಧಿ ನಿಯಮ ತನಗೆ ಹೊರತಾಗಿಲ್ಲ ಎಂದನು
- ಪ್ರಿಯಾ ಶ್ರೀವಿಧಿ,
ಪತ್ರಿಕೋದ್ಯಮ ವಿದ್ಯಾರ್ಥಿನಿ,
ವಿವೇಕಾನಂದ ಮಹಾವಿದ್ಯಾಲಯ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

