ಕವನ: ಗೋಕುಲಾಷ್ಟಮಿಗೆ...

Upayuktha
0



ನಾನು ನಿನ್ನ ನೋಡುವೆ, 

ನೀನು ನನ್ನ ಕಾಡುವೆ,

ಮೊರೆಯನಿಟ್ಟು ಬೇಡುವೆ,

ನೀನು ಒಲಿದು ನೀಡುವೆ

**

ಸಂಧಿಕಾಲದಲ್ಲಿ ಬಂದ ನೀನು

ನಗುತ ಲೀಲೆ ತೋರಿದೆ/

ಆರ್ತರನ್ನು ಪೊರೆದ ನೀನು, ಧೂರ್ತರನ್ನು ಮಣಿಸಿದೆ/

**

ಮಥುರೆಯಲ್ಲಿ ತೋರಿ ಮಾಯೆ, ಗೊಲ್ಲನಾಗಿ ಬಂದವ;/

ಆರ್ತ ಮೊರೆಗೆ ಕರಗಿ ನೀನು

ಕೃಷ್ಣೆಯನ್ನು ಪೊರೆದವ//

**

ಪಾಂಡು ಕುಲಕೆ ನೀನೇ ರಕ್ಷೆ,

ಕುರು ಕುಲಕ್ಕೆ ಕೊಟ್ಟೆ ಶಿಕ್ಷೆ;/

ನಿನ್ನ ಕೊಳಲಿನುಲಿಗೆ ಒಲಿದು

ಮೂಕವಾಯ್ತು ಲೋಕವು//

**

ಬಳಿಗೆ ಬಂದ ಗೋಪಿ ಕುಲಕೆ 

ಸುರಿದೆ ಪ್ರೀತಿ ಒಸಗೆಯ/

ನಿನ್ನ ನೆಚ್ಚಿ ಬಂದ ಜನಕೆ ಕೊಟ್ಟೆ ಬಿಸುಪು ಬೆಸುಗೆಯ//

**

ಸಮರ ಭೂಮಿಯಲ್ಲಿ ನಿಂತು  ನೀನುಸಿರಿದೆ ಗೀತೆಯ/;

ದ್ವಾಪರದಲಿ ಬಂದ ನೀನು

ಎತ್ತಿ ಹಿಡಿದೆ ನೀತಿಯ//

**

ಕತ್ತಲಲ್ಲಿ ಬಂದ‌ ನೀನು, ವಿಶ್ವರೂಪದೊಡಲು;/

ಎಡರುತೊಡರ ಸರಿಸಿ ನಿಂತ, ಬೆರಗಿನೊಂದು ಕಡಲು//

**

ನೀನು ದೈವ, ನಾನು ಜೀವ, 

ನಿನ್ನ ಧ್ಯಾನ ನಾಕವು;/ 

ನಿನ್ನ ಪಡೆದು ಧನ್ಯವಾಯ್ತು 

ನಮ್ಮ ಮೂರು ಲೋಕವು//

********


- ಬಿ ಎಸ್ ಜಯಪ್ರಕಾಶ ನಾರಾಯಣ


Tags

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top