ಇಡ್ಯಾ (ಸುರತ್ಕಲ್): ಬ್ರಾಹ್ಮಣ ಸಮಾಜವು ಸಂಘಟಿತವಾಗಿದ್ದು, ಸಮಾಜದ ಸ್ವಾಭಿಮಾನಕ್ಕೆ ಧಕ್ಕೆಯಾದಲ್ಲಿ ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಬ್ರಾಹ್ಮಣ ಸಮಾಜ ಹಿತರಕ್ಷಕ ವೇದಿಕೆಯ ಅಧ್ಯಕ್ಷರಾದ ರಮೇಶ್ ಟಿ.ಎನ್. ಅಭಿಪ್ರಾಯಪಟ್ಟರು.
ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಜರುಗಿದ ಬ್ರಾಹ್ಮಣ ಸಮಾಜ ಹಿತರಕ್ಷಕ ವೇದಿಕೆ (ಇಡ್ಯಾ ಸುರತ್ಕಲ್)ಯ ‘ಪ್ರತಿಭಾ ಪುರಸ್ಕಾರ ಹಾಗೂ ಅಶಕ್ತರಿಗೆ ವೈದ್ಯಕೀಯ ನೆರವು’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಸಮಾಜದ ಮುಖಂಡರ ಅನಿಸಿಕೆಗಳು:
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬ್ರಾಹ್ಮಣ ಮಹಾಸಭಾ ಸುರತ್ಕಲ್ ವಲಯದ ಅಧ್ಯಕ್ಷ ಶ್ರೀ ವಿಶ್ವೇಶ್ವರ ಬದವೈದೆ ಅವರು ಮಾತನಾಡಿ, "ಸುರತ್ಕಲ್ ಪರಿಸರದ ಬ್ರಾಹ್ಮಣ ಕುಟುಂಬದವರ ಸಮಗ್ರ ಕೈಪಿಡಿಯನ್ನು (Directory) ನವೀಕರಿಸಬೇಕಾದ ಅಗತ್ಯವಿದೆ" ಎಂದು ಪ್ರತಿಪಾದಿಸಿದರು.
ಇನ್ನೋರ್ವ ಅತಿಥಿ, ಬ್ರಾಹ್ಮಣ ಸಂಘ ಕಾಟಿಪಳ್ಳ ಕೃಷ್ಣಾಪುರದ ಅಧ್ಯಕ್ಷ ಶ್ರೀ ರವೀಂದ್ರ ರಾವ್ ಅವರು ಮಾತನಾಡಿ, "ಬ್ರಾಹ್ಮಣ ಸಮಾಜದ ವತಿಯಿಂದ ನೀಡಲಾಗುವ ಪ್ರತಿಭಾ ಪುರಸ್ಕಾರ ಹಾಗೂ ಅರ್ಹ ಅಶಕ್ತರಿಗೆ ಧನಸಹಾಯ ನೀಡುವ ಕಾರ್ಯ ಅತ್ಯಂತ ಸ್ತುತ್ಯರ್ಹ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದಿವ್ಯ ಸನ್ನಿಧಿ ವಹಿಸಿದ್ದ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಶ್ರೀ ಸೂರ್ಯನಾರಾಯಣ ಭಟ್ ಅವರು ಆಶೀರ್ವಚನ ನೀಡುತ್ತಾ, "ಹಿರಿಯರನ್ನು ಆದರಿಸಿ ಗೌರವಿಸುವುದು ಮತ್ತು ಧಾರ್ಮಿಕ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬರ ಅತ್ಯಗತ್ಯ ಕರ್ತವ್ಯ" ಎಂದರು.
ಸಾಧಕರಿಗೆ ಗೌರವ & ಸನ್ಮಾನ:
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ: ಗೋವಿಂದದಾಸ ಕಾಲೇಜು, ವಿದ್ಯಾದಾಯಿನೀ ಶಾಲೆ, ಮಹಾಲಿಂಗೇಶ್ವರ ಶಾಲೆ, ಸೇಕ್ರೆಡ್ ಹಾರ್ಟ್ ಶಾಲೆ ಸೇರಿದಂತೆ ಪರಿಸರದ ವಿವಿಧ ಶಾಲೆಗಳ 24 ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಬಂಗಾರದ ಪದಕ ವಿಜೇತೆಗೆ ಸನ್ಮಾನ: ಸೆಂಟ್ ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿಯ 2025-26ರ ಬಿ.ಎಸ್ಸಿ. ಬಯೋಲಾಜಿಕಲ್ ಸೈನ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಬಂಗಾರದ ಪದಕ ಪಡೆದ ಶ್ರೀ ರವಿಚಂದ್ರ ಮೈರ್ಪಾಡಿ ಮತ್ತು ಶ್ರೀಮತಿ ಚಂದ್ರಿಕಾ ದಂಪತಿಯ ಸುಪುತ್ರಿ ಕುಮಾರಿ ಶ್ರದ್ಧಾ ಅವರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು. ಶ್ರೀ ಎಚ್.ಪಿ. ಸುಬ್ರಹ್ಮಣ್ಯ ಅವರು ಸಾಧಕಿ ಕುಮಾರಿ ಶ್ರದ್ಧಾ ಅವರನ್ನು ಪರಿಚಯಿಸಿ ಅಭಿನಂದಿಸಿದರು.
ಕಾರ್ಯಕ್ರಮದ ವಿವರ:
ವೇದಿಕೆಯ ಗೌರವ ಅಧ್ಯಕ್ಷ ಶ್ರೀ ಎಂ. ವೆಂಕಟರಾವ್ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಶ್ರೀ ಎಚ್. ವಿನಯ ಆಚಾರ್ಯ ಸ್ವಾಗತಿಸಿ, ಕಾರ್ಯಾಧ್ಯಕ್ಷ ಶ್ರೀ ಎಚ್. ಮಧುಸೂದನ ರಾವ್ ಅತಿಥಿ ಅಭ್ಯಾಗತರನ್ನು ಗೌರವಿಸಿದರು. ಶ್ರೀ ಶ್ರೀರಂಗ ಎಚ್. ಶುಭಾಶಂಸನೆ ಗೈದರು.
ಕೋಶಾಧಿಕಾರಿ ಶ್ರೀ ಪ್ರಸಿದ್ಧ ಪಿ. ದಾನಿಗಳ ವಿವರ ನೀಡಿದರೆ, ಶ್ರೀ ಐ. ಗಣೇಶ ರಾವ್, ಶ್ರೀ ಎಚ್.ಪಿ. ನಾಗರಾಜ ಹಾಗೂ ಶ್ರೀ ಉಮೇಶ ಕೆ.ಎಸ್. ಅವರು ಪ್ರತಿಭಾ ಪುರಸ್ಕೃತರ ಪಟ್ಟಿಯನ್ನು ವಾಚಿಸಿದರು. ಶ್ರೀ ಶ್ರೀಧರ ಎಚ್. ಧನ್ಯವಾದ ಸಮರ್ಪಿಸಿದರು. ಕುಮಾರಿ ಅನಘಾ ಪ್ರಾರ್ಥಿಸಿ, ಸಂಘಟನಾ ಕಾರ್ಯದರ್ಶಿ ಶ್ರೀ ಶ್ರೀನಿವಾಸ ಕುಳಾಯಿ ಕಾರ್ಯಕ್ರಮ ನಿರೂಪಿಸಿದರು.
ಮನಸೋರೆಗೊಳಿಸಿದ 'ಗಾನ ಸಂಧ್ಯಾ':
ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಇಡ್ಯಾದ ಶ್ರೀ ಕೃಷ್ಣ ಮೆಲೋಡೀಸ್ ವತಿಯಿಂದ ನಡೆದ ‘ಗಾನ ಸಂಧ್ಯಾ’ ಕರೋಕೆ ಗಾಯನ ಕಾರ್ಯಕ್ರಮದಲ್ಲಿ ಕುಮಾರಿ ಸಹನಾ ಭಟ್ ಹಾಗೂ ಶ್ರೀ ಕಾರ್ತಿಕ್ ರಾವ್ ಅವರ ಗಾಯನವು ಸಭಿಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

