ಹಕ್ಕುಗಳ ಮೇಲೆ ಪ್ರಹಾರಗಳು ಆದಾಗ ಸಾಹಿತಿಗಳು ಮೊದಲು ಸ್ಫಂದಿಸಬೇಕು: ಹಿರಿಯ ನ್ಯಾಯವಾದಿ ಎಂಪಿ ನೊರೊನಾ

Upayuktha
0

 



ಮಂಗಳೂರು: ಸಾಹಿತ್ಯದ ಪ್ರಕಾರಗಳು ಜನರ ಮೇಲೆ ಬಹಳ ಪರಿಣಾಮಕಾರಿಯಾದ ಪ್ರಭಾವವನ್ನು ಬೀರುತ್ತವೆ. ಆದ್ದರಿಂದ ಜನರ ಹಕ್ಕುಗಳ ಮೇಲೆ ಪ್ರಹಾರಗಳ ಬಗ್ಗೆ ಸಾಹಿತಿಗಳು ತಮ್ಮ ಸಾಹಿತ್ಯದಲ್ಲಿ ಧ್ವನಿ ಎತ್ತಬೇಕು ಎಂದು ಹಿರಿಯ ನ್ಯಾಯವಾದಿ ಮತ್ತು ದಕ ಜಿಲ್ಲಾ ಸರಕಾರಿ ಅಭಿಯೋಜಕರು ಆದ ಎಂಪಿ ನೊರೊನಾ ನುಡಿದರು.

ಅವರು ಮಂಗಳೂರು ಬಲ್ಮಠದ ಸಹೋದಯ ಸಭಾಗೃಹದಲ್ಲಿ ನಡೆದ ಅಖಿಲ ಭಾರತೀಯ ರಾಷ್ಟ್ರೀಯ ಐದನೇ ಚಾರೊಳಿ ಸಾಹಿತ್ಯ ಸಮ್ಮೇಳನದಲ್ಲಿ ತಡಪೆಯ ಮೇಲೆ ಇಟ್ಟ ಹಿತ್ತಾಳೆಯ ಸೇರಿಗೆ ಅಕ್ಕಿಯನ್ನು ತುಂಬಿಸಿ ಅದರ ತುಪ್ಪೆಯ ಮೇಲೆ ದೀಪ ಬೆಳಗಿಸಿ ಇಟ್ಟು ಉದ್ಘಾಟಿಸಿ‌ ಬಳಿಕ ಮಾತನಾಡಿದರು.‌


ಐದನೆಯ ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷ ರೇಮಂಡ್ ಡಿಕೂನಾ ತಾಕೊಡೆ ಮಾತನಾಡಿ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗೋವಾ, ದುಬೈನ, ಬೆಂಗಳೂರಿನ, ಕಾರವಾರದ ವಿವಿಧ ಲಿಪಿಗಳಲ್ಲಿ ಮತ್ತು ತರಹದ ಬೋಲಿಗಳಲ್ಲಿ ಕೊಂಕಣಿ ಬರೆಯುವ ಕವಿಗಳು ಇಲ್ಲಿ ಸೇರಿರುವುದು ವಿಷೇಶವಾಗಿದೆ. ಇದು ಭಾರತದ ವಿವಿಧತೆಯಲ್ಲಿ ಏಕತೆಯ ಕೊಂಕಣಿ ಸಂಭ್ರಮ ಆಗಿದೆ ಎಂದರು.

ವೇದಿಕೆಯಲ್ಲಿ ಪೋರ್‌ವಿಂಡ್ಸ್ ಮಾಸ್ ಕಮ್ಯುನಿಕೇಶನ್ಸ್ ಎಂಡ್ ಸರ್ವಿಸಸ್ ನ ಮಾಲೀಕ ಎಲಿಯಾಸ್ ಫರ್ನಾಂಡೀಸ್ ಇದ್ದರು. ಸಮಾರೋಪ ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಕ ಪ್ರತಿನಿಧಿ ಆದ ಶ್ರೀನಿವಾಸ ನಾಯಕ್ ಇಂದಾಜೆ ಕವಿಗಳಿಗೆ ಸನ್ಮಾನ ಪತ್ರ ಮತ್ತು ಪದಕಗಳನ್ನು ವಿತರಣೆ ಮಾಡಿದರು. ಯೊಗಿತಾ ವರ್ಣೇಕರ್ ಸಮಾರೋಪ ಭಾಷಣ ಮಾಡಿದರು.



ಮಂಗಳೂರಿನ ಅರುಂಧತಿ ವಿ ರಾವ್ ಮತ್ತು ಗೋವಾದ ಅನ್ನಿ ದೆ ಕೊಲ್ವಾಲೆ ಅವರಿಗೆ ರಾಷ್ಟ್ರೀಯ ಚಾರೊಳಿ ಸಾಹಿತ್ಯ ಪುರಸ್ಕಾರ ಪ್ರದಾನ ಮಾಡಲಾಯಿತು. ವಿದ್ಯಾರ್ಥಿಗಳು ಮತ್ತು ಸಾಹಿತಿಗಳ ನಡುವೆ ಮುಂದೆ ಸಾಹಿತ್ಯ ಉಳಿಸುವ ಮತ್ತು ಬೆಳೆಸುವ ಬಗ್ಗೆ ವಿಚಾರ ವಿನಿಮಯದ ಸಂತ ಅಲೋಶಿಯಸ್ ಕಾಲೇಜಿನ ಮತ್ತು ಗೋವಾದ ವಿದ್ಯಾರ್ಥಿಗಳು ಭಾಗವಹಿಸಿದರು.


ಗೋವಾದ ಹಿರಿಯ ಕೊಂಕಣಿ ಕವಿ ಮತ್ತು ಭಾಷಾತಜ್ನಾರಾದ ಗೌರಿಶ್ ವರ್ಣೇಕರ್ ಕವಿ ಗೋಷ್ಠಿಗೆ ಚಾಲನೆ ನೀಡಿದರು. ಸೇಂಟ್ ಆನ್ಸ್ ಫ್ರೈರಿಯ ಸುಪೀರಿಯರ್ ಫಾ. ಜೆರಾಲ್ಡ್ ಲೋಬೊ, ಕ್ಯಾಪುಚಿನ್ ಪಾರ್ಥಿಸಿದರು. ಹಿರಿಯ ಸಾಹಿತಿ ರೇಮಂಡ್ ಡಿಕೂನಾ ತಾಕೊಡೆ ಸ್ವಾಗತಿಸಿ, ರಿಯಾನಾ ಡಿಕೂನಾ ವಂದಿಸಿದರು.ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ಹಿರಿಯ ಪ್ರಾದ್ಯಾಪಕಿ ನತಾಲಿಯಾ ಡಿಕೂನಾ ನಿರೂಪಿಸಿದರು. ಜೋನ್ ತಾವ್ರೊ, ಸ್ಟೇನಿ ತಾವ್ರೊ, ಲೊನಾ ವಾಸ್, ವಿರೊಯ್ ಡೆಸಾ,ಹೆರಾಲ್ಡ್ ಅಲ್ಬುಕರ್ಕ್ ಸಹಕರಿಸಿದರು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top