ಕಲಬುರಗಿ: ರಾಮ್ ಗ್ರೂಪ್ ಹಣಕಾಸು ಸಂಸ್ಥೆಯನ್ನು ಈಡಿಗ ಸಮಾಜದ ಗುರುಗಳಾದ ಪೂಜ್ಯಶ್ರೀ ಡಾ ಪ್ರಣವಾನಂದ ಸ್ವಾಮೀಜಿ ದೀಪ ಬೆಳಗಿಸಿ ಶುಭಾರಂಭಗೊಳಿಸಿದರು.
ಕಲಬುರಗಿಯ ಅಳಂದ ಚೆಕ್ ಪೋಸ್ಟ್ ಬಳಿಯಲ್ಲಿ ನೂತನವಾಗಿ ಪ್ರಾರಂಭಿಸಲಾದ ಹಣಕಾಸು ಸಂಸ್ಥೆಯನ್ನು ಜೂನ್ 25ರಂದು ಪೂಜ್ಯರ ಹಾಗೂ ಅತಿಥಿಗಳ ಸಮ್ಮುಖದಲ್ಲಿ ಶುಭಾರಂಭಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಸುಲೇಪೇಟ್ ಏಕದಂಡಗಿ ಮಠದ ಶ್ರೀ ದೊಡ್ಡೇಂದ್ರ ಸ್ವಾಮೀಜಿ, ಯಾದಗಿರಿ ಬಸವ ಯೋಗಾಶ್ರಮದ ಶ್ರೀ ಬಸವ ಒಕ್ಕಲಿಗ ಮುದ್ದಣ ಶರಣರು ಹಾಗೂ ಬಾಗಲಕೋಟೆಯ ಶಿವಸಿಂಪಿ ಸಮಾಜದ ಮಹಾಂತ ಮಠದ ಶ್ರೀ ಮಹಾಂತ ಸ್ವಾಮೀಜಿ, ಹಾಗೂ ಉದ್ಯಮಿಗಳಾದ ಕುಪೇಂದ್ರ ಗುತ್ತೇದಾರ್ ನಾಗೂರ್ , ವೆಂಕಟೇಶ ಎಂ ಕಡೇಚೂರ್, ಡಾ ಸದಾನಂದ ಪೆರ್ಲ ಮತ್ತಿತರ ಅನೇಕ ಗಣ್ಯರು ಉಪಸ್ಥಿತರಿದ್ದರು. ನಿರ್ದೇಶಕರಾದ ರಮೇಶ್ ಸರ್ವರನ್ನು ಸ್ವಾಗತಿಸಿ ಶಾಲು ಹಣ್ಣು ಹಂಪಲು ನೀಡಿ ಸನ್ಮಾನಿಸಿದರು ಈ ಸಂದರ್ಭದಲ್ಲಿ ಪಾಲುದಾರರಾದ ನಾಗೇಶ್, ಆಕಾಶ್ ಮತ್ತಿತರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


