ಮಂಗಳೂರು: ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗುವ ಕಡೆಗೆ ಹೆಚ್ಚಿನ ಗಮನ ನೀಡಬೇಕಿದೆ ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಕಾರ್ಯಾಧ್ಯಕ್ಷ ಜೀವನ್ ಅವರು ಅಭಿಪ್ರಾಯಪಟ್ಟರು.
ಅವರು ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ
ವಿದಾಯ ಸಮಾರಂಭದಲ್ಲಿ ಅತಿಥಿಗಳಾಗಿ ಮಾತನಾಡಿದರು. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಪೋಷಕರು ಹಾಗೂ ಅಧ್ಯಾಪಕರು
ಹೆಮ್ಮೆ ಪಡುವಂತಹ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪೂರ್ವತನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಎಸ್., ಪದವಿ ವ್ಯಾಸಂಗ ಮುಗಿದ
ನಂತರವೇ ವಾಸ್ತವ ಬದುಕು ಪ್ರಾರಂಭವಾಗುತ್ತದೆ. ಕಾಲೇಜು ಆವರನ ದಾಟಿದ ನಂತರ ಬದುಕಿನ ಅಸ್ಥಿತ್ವಕ್ಕಾಗಿ
ಹೋರಾಟ ಮಾಡಬೇಕಾಗುತ್ತದೆ. ವಿದ್ಯಾಭ್ಯಾಸದ ವೇಳೆ ಆಟ-ಪಾಠ, ಮೋಜು-ಮಸ್ತಿ ಎಲ್ಲವೂ ಸಾಮಾನ್ಯ. ಆದರೆ
ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಗಂಭೀರವಾಗಿ ಚಿಂತಿಸಬೇಕಿದೆ. ಯಾವುದೇ ಕೆಲಸ ಮೇಲಲ್ಲ, ಯಾವುದೂ
ಕೀಳಲ್ಲ. ಆದರೆ ಪ್ರತಿಯೊಂದು ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಬೇಕಿದೆ ಎಂದು ಕಿವಿ ಮಾತು ಹೇಳಿದರು.
ಕಲಾ ನಿಕಾಯದ ಹಿರಿಯ ಪ್ರಾಧ್ಯಾಪಕ ಪ್ರೊ. ರಾಮಕೃಷ್ಣ ಬಿ.ಎಂ., ವಿದ್ಯಾರ್ಥಿಗಳ ಪರಿಪೂರ್ಣ
ವ್ಯಕ್ತಿತ್ವ ನಿರ್ಮಾಣಕ್ಕೆ ಅಡಿಪಾಯ ಹಾಕಿಕೊಡುತ್ತದೆ. ಪದವಿ ವ್ಯಾಸಂಗ ಪ್ರತಿ ವಿದ್ಯಾರ್ಥಿಗೂ ಸಮಾನ
ಅವಕಾಶ ಕಲ್ಪಿಸುತ್ತದೆ. ಆದರೆ ಅದ್ನನು ಎಷ್ಟರಮಟ್ಟಿಗೆ ಬಳಸಿಕೊಂಡು ಬದುಕಿನಲ್ಲಿ ಬೆಳೆಯಬೇಕು ಎಂಬುದನ್ನು
ಅರಿಯಬೇಕಿದೆ ಎಂದರು.
ವಿಜ್ಞಾನ ನಿಕಾಯದ ಹಿರಿಯ ಪ್ರಾಧ್ಯಾಪಕಿ ಪ್ರೊ. ಶೋಭಾ, ಪದವಿ ಹಂತ ವಿದ್ಯಾರ್ಥಿ ಜೀವನದಲ್ಲಿ
ಅತ್ಯಂತ ಪ್ರಮುಖ ಹಂತ. ಇಲ್ಲಿ ಕಲಿತ ಪಾಠಗಳನ್ನು ಬದುಕು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಬಳಸಿಕೊಂಡಾಗ
ಮಾತ್ರವೇ ಯಶಸ್ವಿಯಾಗಲು ಸಾಧ್ಯ. ಹೀಗೆ ಅಭಿವೃದ್ಧಿ ಹೊಂದುವಗ ಮಾನಸಿಕ, ಶಾರೀರಿಕ ಹಾಗೂ ಸುತ್ತಲಿನ
ಪರಿಸರ ಸ್ವಚ್ಛತೆಗೂ ಗಮನ ನೀಡಬೇಕಿದೆ ಎಂದರು.
ವಾಣಿಜ್ಯ ನಿಕಾಯದ ಹಿರಿಯ ಪ್ರಾಧ್ಯಾಪಕ ಪ್ರೊ. ಯತೀಶ್ ಕುಮಾರ್, ಬದುಕಿನಲ್ಲಿ ಆವಿಷ್ಕಾರ,
ಬದಲಾವಣೆ, ಶಿಸ್ತು, ಸೃಜನಶೀಲತೆ, ಮಾನವೀಯತೆಯಂತಹ ಗುಣಗಳನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ ಎಂದು
ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯವಂತ ನಾಯಕ್, ಕೇವಲ ಕಲ್ಲಾಗಿರುವ ವಿದ್ಯಾರ್ಥಿಗಳನ್ನು
ಸುಂದರ ಶಿಲೆಯನ್ನಾಗಿ ಮಾಡುವಲ್ಲಿ ಎಲ್ಲಾ ಅಧ್ಯಾಪಕರ ಶ್ರಮವಿದೆ. ಆ ಶ್ರಮ ವ್ಯರ್ಥವಾಗದ ರೀತಿಯಲ್ಲಿ
ಬದುಕಿನಲ್ಲಿ ನಡೆದುಕೊಂಡಾಗ ಮಾತ್ರವೇ ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಸಾಧ್ಯವಾಗುತ್ತದೆ. ಅಲ್ಲದೇ,
ಬದುಕಿನಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಲು ಬೇಕಾದ ಆತ್ಮಸ್ಥೈರ್ಯವನ್ನು ವಿದ್ಯಾಭ್ಯಾಸ ಒದಗಿಸಿಕೊಡುತ್ತದೆ
ಎಂದು ತಿಳಿಸಿದರು.
ಇದೇ ವೇಳೆ, ಅಂತಿಮ ಪದವಿ ವಿದ್ಯಾರ್ಥಿಗಳು ಕಾಲೇಜಿನ ಕುರಿತಾಗಿ ತಮ್ಮ ಅನುಭವಗಳನ್ನು
ಹಂಚಿಕೊಂಡರು. ರಕ್ಷಕ-ಶಿಕ್ಷಕ ಸಂಘದ ಕಾರ್ಯಕಾರಿ ಸದಸ್ಯರು, ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಜರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


