ಜೂ. 21 ತಂದೆಯಂದಿರ ದಿನ "ಅಪ್ಪ ಐ ಲವ್ ಯೂ ಅಪ್ಪ"

Upayuktha
0

 


ಜೂನ್ 21ರಂದು ವಿಶ್ವ ಅಪ್ಪಂದಿರ ದಿನಫಾದರ್ಸ್ ದಿನದ ಅರ್ಥ ಮತ್ತು ತಂದೆಯ ಮಹತ್ವವನ್ನು ತಿಳಿದುಕೊಳ್ಳಬೇಕು. ಅಪ್ಪ ಅಮ್ಮ ದೇವರ ಸಮಾನ. ಅಪ್ಪ ಎಂದರೆ ಬೆಳಕು. ಅಪ್ಜನಿಂದಲೇ ಬದುಕು.. ಅಪ್ಪನ  ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ತಂದೆಯ ಸ್ಥಾನ ಮತ್ತು ಅಪ್ಪ ಅಮ್ಮನ ಪ್ರೀತಿ ಅತ್ಯಮೂಲ್ಯವಾದದ್ದು. ನಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕುವರು ಅಪ್ಪ. ಅಂತಹ ತಂದೆ ತಾಯಿಗೆ ನಾವು ಯಾವಾಗಲೂ ಗೌರವದಿಂದ ಕಾಣಬೇಕು. ಅದು ನಮ್ಮ ಕರ್ತವ್ಯ ಕೂಡ


ಅಪ್ಪ ನೀ ದೇವರು ಜಗವೆಲ್ಲಾ ನೀನೆ ಅಪ್ಪ. ಅಪ್ಪ ಎಂಬ ಎರಡಕ್ಷರ ಪವಿತ್ರವಾದ ಸಂಕೇತ. ಹೌದು ಅಪ್ಪ ಅಮ್ಮ ದೇವರ ಸ್ವರೂಪ. ನಾವು ದೇವರನ್ನು ಎಷ್ಟು ಭಯ ಭಕ್ತಿಯಿಂದ ಗೌರವದಿಂದ ಪೂಜಿಸಿ ಆರಾದಿಸುತ್ತೇವೆಯೋ ಹಾಗೇಯೇ  ಅಮ್ಮ ಅಪ್ಪನ  ಭಯ ಭಕ್ತಿಯಿಂದ ಗೌರವದಿಂದ ನೋಡಿಕೊಳ್ಳಬೇಕು. ಅಪ್ಪ ಇಲ್ಲದ ಪ್ರಪಂಚವಿಲ್ಲಎಲ್ಲಾ ಮಕ್ಕಳಿಗೂ ತಂದೆ ತಾಯಿಯ  ಆಶೀರ್ವಾದ ಬೇಕು ಅವರಿಂದಲೇ ನಾವು.  


ತಾಯಿ ಮೊದಲ ಗುರು ಮನೆಯ ಮೊದಲ ಪಾಠ ಶಾಲೆ ತನ್ನ ಮಕ್ಕಳಿಗೆ ಮೊದಲನೆಯ ಶಿಕ್ಷಕಿ ತಾಯಿ. ಮಗು ತನ್ನ ಜೀವನದಲ್ಲಿ ಹೇಳುವ ಮೊದಲ ಪದವೂ ಅಮ್ಮ ಅಪ್ಪ ಎಲ್ಲಾ ಮಕ್ಕಳ  ಪಾಲಿಗೆ ಅಪ್ಪನೇ ಮೊದಲ ಹೀರೋ. ಅಪ್ಪ ಮಗುವಿನ ತೋರು ಬೆರಳು ಹಿಡಿದು ತನ್ನ ಸುತ್ತ ಮುತ್ತ ಇಡೀ ಜಗತ್ತನೇ ತೋರಿಸುತ್ತಾರೆ. ಅಪ್ಪ ಅಂದರೆ ಜಗತ್ತು ಅಪ್ಪ ಅಂದರೆ ದೇವರು ಅಪ್ಪ ಅಂದರೆ ಶಕ್ತಿ ಅಪ್ಪ ಅಂದರೆ ಆಕಾಶ  ಅಪ್ಪ ಅಂದರೆ ಸ್ನೇಹಿತ ಅಪ್ಪ ಅಂದರೆ ಪಪ್ರಂಚ ಅಪ್ಪ ಅಂದರೆ ಪ್ರೀತಿ  ಅಪ್ಪ ಅಂದರೆ ಬೆಳಕು ಅಪ್ಪ ಅಂದರೆ ಸಂತೋಷ ಹೀಗೆ ಎಷ್ಟು ಅರ್ಥಗಳಿವೆ


ಅಪ್ಪ ಮಕ್ಕಳನ್ನು ಬೈಯುವುದಕ್ಕೆ ಮುಖ್ಯ ಕಾರಣ ನಾವು ಮಾಡಿರೋ ತಪ್ಪನ್ನು ಮತ್ತೇ ಮಾಡಬಾರದು ಮತ್ತು ನಮಗೆ ಯಾವ ಕೆಡಕು ಆಗಬಾರದು ಅಂತ. ಎಷ್ಟೇ ಬೈದ್ರೂ ಮನಸ್ಸಲಿ ಬೆಟ್ಚದಷ್ಟು ಪ್ರೀತಿ ಇರುತ್ತದೆ. ತನಗೆ ಎಷ್ಟೇ ಕಷ್ಟ ನೋವು  ಬಂದ್ರು ತನ್ನ ಮಕ್ಕಳು ನಮ್ಮ ಕುಟುಂಬ ಖೂಷಿಯಾಗಿ ಸಂತೋಷವಾಗಿ ಇರಬೇಕು ಎಂದು ಬಯಸುವರು ಅಪ್ಪ. ಮಕ್ಕಳು ಕೇಳಿದ್ದನ್ನೆಲ್ಲಾ  ಕೊಡಿಸೋಕ್ ಆಗದೇ ಇದ್ರೂ ಕೈಲಾಗಿದ್ದನ್ನ ಕೊಡಿಸುವರು ಅಪ್ಪ. ಬೇಡಿದಷ್ಟು ಕೊಡದೇ ಹೋದ್ರು ಸ್ವಲ್ಪವಾದರು ಕೊಡಿಸುವರು ತನ್ನಿಂದ ಸಾಧಿಸೋಡಕ್ಕಾಗದೇ ಇರೋದನ್ನ ತನ್ನ ಮಕ್ಕಳಿಂದ ಮಾಡಿಸೋಡಕ್ಕೆ ಪ್ರಯತ್ನ ಮಾಡುವರು. ಎಷ್ಟೇ ಕಷ್ಟಗಳು ನೋವುಗಳು ಬಂದರು ತನ್ನಲ್ಲಿಟ್ಟುಕೊಂಡು ಮಕ್ಕಳನ್ನು ಪ್ರೀತಿ ಮಾಡುವರು ಅಪ್ಪ. ಅಪ್ಪ  ಯಾವಾಗಲೂ ತನ್ನ ದುಃಖಗಳನ್ನು ಮರೆತು ಮಕ್ಕಳ ಜೀವನ ಸಂತೋಷದ ಬಗ್ಗೆ ಯೋಚಿಸುತ್ತಾರೆ. ಮಕ್ಕಳು ಸಂತೋಷವಾಗಿರುವುದು ನೋಡಿ ಅವರು ಸಂತೋಷವಾಗಿರುತ್ತಾರೆ. ತಂದೆ ತಾಯಿಯ ಋಣವನ್ನು ನಾವು ಎಂದಿಗೂ ತೀರಿಸಲು ಸಾಧ್ಯವಿಲ್ಲ ಆದ್ದರಿಂದ ನಾವು ನಮ್ಮ ತಂದೆ ತಾಯಿಗೆ ಸಾಧ್ಯವಾದಷ್ಟು ಸೇವೆ ಸಲ್ಲಿಸಬೇಕು ನಮ್ಮ  ವ್ಯಕ್ತಿತ್ವವನ್ನು ಹೆಚ್ಚಿಸಲು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟ ಜೀವನದ ಪ್ರತಿಯೊಂದು ಸಂತೋಷವನ್ನು ನಾವು ತಾಯಿ ತಂದೆಗೇ ನೀಡಬೇಕು. ಅಪ್ಪ ಲವ್ ಯೂ...!



ವಿ.ಎಂ.ಎಸ್.ಗೋಪಿ 

ಲೇಖಕರು, ಸಾಹಿತಿಗಳು

ಬೆಂಗಳೂರು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top