ಬೆಂಗಳೂರು: ನೃತ್ಯ ದಿಶಾ ಟ್ರಸ್ಟ್ ವತಿಯಿಂದ ಜುಲೈ 3, ಶುಕ್ರವಾರ ಸಂಜೆ 5-00ಕ್ಕೆ ನಗರದ ಜೆ.ಸಿ. ರಸ್ತೆಯಲ್ಲಿರುವ ಎಡಿಎ ರಂಗಮಂದಿರದಲ್ಲಿ ಭರತನಾಟ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.
ಗುರು ಡಾ|| ದರ್ಶಿನಿ ಮಂಜುನಾಥ್ ಅವರ ಶಿಷ್ಯೆಯರಾದ ಕು|| ಹರ್ಷಿತಾ ಶ್ರೀರಾಮ್, ಕು|| ಪ್ರಾರ್ಥನಾ ಯೋಗಾನಂದ ಹಾಗೂ ಕು|| ವರ್ಷ ಎಸ್. ಏಕ್ಬೋಟೆ ಭರತನಾಟ್ಯ ಕಾರ್ಯಕ್ರಮ ನೀಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಮತಿ ಪಲ್ಲವಿ ರಾಘವೇಂದ್ರ ಸಂಸ್ಥಾಪಕಿ ಮತ್ತು ಕಲಾ ನಿರ್ದೇಶಕಿ, ಅನುರಾಗ ಕಲಾ ಗುರುಕುಲ, ಬಾಲಚಂದ್ರನ್ ಬಿ. ಎಸ್., ವಕೀಲರು, ತೆರಿಗೆ ಸಲಹೆಗಾರರು ಹಾಗೂ ಅಲ್ಸೂರ್ ಪೇಟೆಯ ಶ್ರೀ ಸೀತಾರಾಮ ಮಂದಿರ, ಶ್ರೀ ಚಿಕ್ಕಣ್ಣಮ್ಮ ದೇವಿ ದೇವಸ್ಥಾನದ ಗೌರವ ಕಾರ್ಯದರ್ಶಿಗಳು ಮತ್ತು ವಿದುಷಿ ಹಂಸವೀಣಾ ಸುರೇಶ್ ಗಾಯಕಿ ಹಾಗೂ ವೀಣಾ ವಾದಕಿ ವೀಣಾ ಗಾನ ಸಂಗೀತ ಶಾಲೆ, ಆರ್.ಆರ್. ನಗರ, ಈ ಎಲ್ಲಾ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ್ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


