ಬೆಳ್ತಂಗಡಿ: ಕಳೆದ 24 ವರ್ಷಗಳಿಂದ ಸತತವಾಗಿ ದೇಶಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಬೆಳ್ತಂಗಡಿ ತಾಲೂಕಿನ ಬೈಪಾಡಿ ಗ್ರಾಮ ಕಾಡಂಡ ಮನೆತನದ ಎ.ಸಿ.ಪಿ.ನಾಯಕ್ ಸುಬೇದಾರ್ ಮೋಹನ್ ಗೌಡ ಕಾಡಂಡ ಇವರು ದೇಶದ ವಿವಿಧ ಪ್ರದೇಶಗಳಲ್ಲಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಕಳೆದ ಮಾರ್ಚ್ 31 ರಂದು ನಿವೃತ್ತಿಗೊಂಡು ಇದೀಗ ಸ್ವಗ್ರಾಮದಲ್ಲಿ ನೆಲೆಸಿರುವ ಇವರಿಗೆ ಹಾಕೊಟೆದಡಿ ಮನೆತನದವರ ವತಿಯಿಂದ ಅದ್ದೂರಿಯಾಗಿ ಗೌರವ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮನೆಯ ಹಿರಿಯರಾದ ಶ್ರೀಮತಿ ಶೀಲಾವತಿ ಹಾಗೂ ಮಕ್ಕಳು ಮತ್ತು ಅಳಿಯಂದಿರಾದ ರಾಜ್ಯ ಮಟ್ಟದ ಮಕ್ಕಳ ಸ್ನೇಹಿ ಶಿಕ್ಷಕ ಪ್ರಶಸ್ತಿ ವಿಜೇತ ಭಾಸ್ಕರ್ ನೆಲ್ಯಾಡಿ, ಕೊಯಿಲ ಸ.ಹಿ.ಪ್ರಾ. ಶಾಲಾ ಶಿಕ್ಷಕಿ ಹರಿಣಾಕ್ಷಿ ಹಾಗೂ ಉದ್ಯಮಿ ಸದಾನಂದ ಗೌಡ ಶ್ವೇತಾ ಸದಾನಂದ ಹಾಗೂ ಕುಟುಂಬಸ್ಥರು, ಬಂಧುಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


