ಕಾಸರಗೋಡು: ಕಳೆದ ದಶಕದ ಅಂತ್ಯದಲ್ಲಿ ಕಾಸರಗೋಡಿನಿಂದ ಪ್ರಕಟಗೊಳ್ಳುತ್ತಿದ್ದ ‘ಗಡಿನಾಡು’ ಸಂಜೆ ಪತ್ರಿಕೆಯ ಪ್ರಕಾಶಕ/ ಸಂಪಾದಕರಾಗಿದ್ದ ಕೆ. ಗಣೇಶ (68) ನಿಧನರಾದರು. ಇವರು ಕಾಸರಗೋಡು ಉಳಿಯತಡ್ಕ ಭಗವತಿ ನಗರ ನಿವಾಸಿಯಾಗಿದ್ದರು. 1985- 90 ರ ಕಾಲಕ್ಕೆ ‘ಗಡಿನಾಡು” ಕಾಸರಗೋಡಿನ ಜನಪ್ರಿಯ ಪತ್ರಿಕೆಯಾಗಿತ್ತು. ತಾಲೂಕಿನಲ್ಲಿ 90 ರ ದಶಕದಲ್ಲಿ ನಾಲ್ಕು ಕನ್ನಡ ಪತ್ರಿಕೆಗಳು ಯಶಸ್ವಿಯಾಗಿ ಪ್ರಕಟವಾಗಲು “ಗಡಿನಾಡು” ಪ್ರೇರಣೆಯಾಗಿತ್ತು.
ದಿ. ಕಿಟ್ಟು ಪೂಜಾರಿ- ಕೊರಪ್ಪಾಳು ದಂಪತಿಗಳ ಪುತ್ರನಾದ ಇವರು ಪತ್ನಿ ಮಾಲತಿ, ಮಕ್ಕಳಾದ ಕಿಶೋರ್, ಸ್ಮಿತ ಹಾಗೂ ಮೊಮ್ಮಕ್ಕಳ ಸಹಿತ ಅಪಾರ ಬಂಧು ಬಳಗವನ್ನಗಲಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


