ಹೆಣ್ಣು ಹುಟ್ಟಿದಾಗ ನಿಶ್ಶಬ್ದ ಏಕೆ?
ಅವಳ ಹೆಜ್ಜೆಯಲ್ಲಿ ಭವಿಷ್ಯ ಇದೆ.
ಧ್ವನಿಯಲ್ಲಿ ಸ್ತ್ರೀ ಅನಂತ ಶಕ್ತಿಯಿದೆ
ಅವಳ ಮಹಿಮೆ ಜಗಕೆ ಚಿರಂತನ.
ತಾಯಿಯಾಗಿ ಅವಳು ಅನ್ನಪೂರ್ಣೆ,
ಹೆಂಡತಿಯಾಗಿ ಸಹನೆಯ ಸಾಗರ,
ಮಗಳಾಗಿ ಮನೆಗೆ ಪರಿಮಳ,
ಹೆಣ್ಣಿಲ್ಲದ ಜೀವನ ಬರಡಾದ ಮರಳು ಭೂಮಿ.
ಅಡುಗೆ ಮಾಡುವ ಕೈ ಮಾತ್ರವಲ್ಲ,
ಭವಿಷ್ಯ ರೂಪಿಸುವ ಶಕ್ತಿ.
ಮನೆ ನೋಡಿಕೊಳ್ಳುವವಳು ಮಾತ್ರವಲ್ಲ,
ಕುಟುಂಬ ಕಟ್ಟುವ ಭಕ್ತಿ.
ಪ್ರಬೋಧನದ ಪರಿವರ್ತನೆಯ ಮಾರ್ಗವು
ಸಾಮರಸ್ಯದ ಬೀಜ ಬಿತ್ತುವಳು.
ಪ್ರಕೃತಿಗೆ ಹೊಸ ಜೀವ ನೀಡುವಳು,
ಸಂಸ್ಕಾರದ ದೀಪ ಹಚ್ಚುವಳು.
-ಭಾಗ್ಯಶ್ರೀ ಜೀವಂಧರ ಕಾಶಿನ (ಬಳಿಗಾರ)
ಕನ್ನಡ ಉಪನ್ಯಾಸಕರು
ಚೇತನ ವಾಣಿಜ್ಯ ಪದವಿ ಬಿಬಿಎ& ಬಿಸಿಎ ಮಹಾವಿದ್ಯಾಲಯ ಹುಬ್ಬಳ್ಳಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



