ಮಾ.22ರಂದು ಸಂತೋಷಕುಮಾರ ಮೆಹಂದಳೆ ಅವರ 'ವಿಕ್ರಮಾದಿತ್ಯ' ಬಿಡುಗಡೆ

Upayuktha
0


ಬೆಂಗಳೂರು, ಮಾರ್ಚ್ 18: ಸಂತೋಷಕುಮಾರ ಮೆಹಂದಳೆ ಅವರ ಹೊಸ ಕೃತಿ ‘ವಿಕ್ರಮಾದಿತ್ಯ’ ಬಿಡುಗಡೆ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮ ಮಾರ್ಚ್ 22ರಂದು ಬೆಂಗಳೂರಿನಲ್ಲಿ ನಡೆಯಲಿದೆ.


ಲೇಖಕ ಸಂತೋಷಕುಮಾರ ಮೆಹಂದಳೆ ಅವರು ರಚಿಸಿರುವ ಈ ಕೃತಿ ‘ವಿಕ್ರಮಾದಿತ್ಯ’ ಕಥೆಯನ್ನು ವಿಭಿನ್ನ ಸಂವಾದ ಮತ್ತು ಪುನರ್‌ಸೃಜನಾತ್ಮಕ ಶೈಲಿಯಲ್ಲಿ ಪ್ರಸ್ತುತಪಡಿಸುವ ಪ್ರಯತ್ನವಾಗಿದೆ.  ಸಾಹಿತ್ಯಾಸಕ್ತರು ಹಾಗೂ ಓದುಗರನ್ನು ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.


ಕಾರ್ಯಕ್ರಮವು ಮಾರ್ಚ್ 22, 2026 (ಭಾನುವಾರ) ರಂದು ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದೆ. ಈ ಸಮಾರಂಭವು ಬೆಂಗಳೂರಿನ ಹರಿವು ಬುಕ್ಸ್, ನಂ. 67, 1ನೇ ಮಹಡಿ, ಸೌತ್ ಅವೆನ್ಯೂ ಕಾಂಪ್ಲೆಕ್ಸ್, ಡಿ.ವಿ. ಗುಂಡಪ್ಪ ರಸ್ತೆ, ಬಸವನಗುಡಿ, ನಾಗಸಂದ್ರ ವೃತ್ತದ ಹತ್ತಿರದಲ್ಲಿ ನಡೆಯಲಿದೆ.


ಪುಸ್ತಕಾಸಕ್ತರು, ಸಾಹಿತ್ಯಪ್ರೇಮಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಆಯೋಜಕರು ಮನವಿ ಮಾಡಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top