ಮಂಗಳೂರು: ಮಂಗಳೂರಿನ ವಳಚ್ಚಿಲ್ನಲ್ಲಿರುವ ಶ್ರೀನಿವಾಸ ಫಾರ್ಮಸಿ ಕಾಲೇಜ್ನಲ್ಲಿ 14 ಮತ್ತು 15 ಮಾರ್ಚ್ 2026ರಂದು ಇಂಟರ್ ನ್ಯಾಷನಲ್ ಕಾನ್ಪರೆನ್ಸ್ ಆನ್ ಟೆಕ್ನಾಲಾಜಿಕಲ್ ಅಡ್ವಾನ್ಸಸ್ ಇನ್ ಪ್ರಾಕ್ಟೀಸ್ ಆಂಡ್ ಸಸ್ಟೈನೆಬಿಲಿಟಿ ಎಂಬ ವಿಷಯದಲ್ಲಿ ಅಂತರಾಷ್ಟ್ರೀಯ ವಿಚಾರಸಂಕಿರಣವು ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್, ದ.ಕ ಸ್ಥಳೀಯ ಶಾಖೆ, ಮಂಗಳೂರು ಮತ್ತು ಶ್ರೀನಿವಾಸ ಯುನಿವರ್ಸಿಟಿ, ಮುಕ್ಕ ಇದರ ಸಹಯೋಗದೊಂದಿಗೆ ನಡೆಯಲಿರುವುದು.
ಈ ವಿಚಾರಸಂಕಿರಣವನ್ನು ಗೌರವಾನ್ವಿತ ಪ್ರೊ. ಚಾನ್ಸೆಲರ್, ಶ್ರೀನಿವಾಸ್ ಯುನಿವರ್ಸಿಟಿ ಮತ್ತು ಎ.ಶಾಮರಾವ್ ಪ್ರತಿಷ್ಠಾನದ ಉಪಾಧ್ಯಕ್ಷರಾದ ಡಾ.ಎ.ಶ್ರೀನಿವಾಸ್ರಾವ್, ಇವರು ದೀಪ ಬೆಳಗಿಸಿ ಉದ್ಘಾಟಿಸಲಿರುವರು.
ಮುಖ್ಯ ಅತಿಥಿಗಳಾಗಿ ಡಾ.ಮೆಡ್.ಕ್ರಿಸ್ಟೋಪರ್ ರೋರಿಗ್, ಎಎನ್ಎಸ್ಪಿ, ಜರ್ಮನಿ ಹಾಗೂ ಗೌರವಾನ್ವಿತ ಅತಿಥಿಗಳಾಗಿ ಕೆವಿ ನಾಗರಾಜ್, ಡ್ರಗ್ಸ್ ಕಂಟ್ರೋಲರ್, ಮಂಗಳೂರು, ಪ್ರೊ. ಇ.ಎಮ್ ಡಾ. ಮೆಡ್, ಅಪು ರೋರಿಗ್, ಪ್ರಾಜೆಕ್ಟ್ ಸೈಂಟಿಪಿಕ್ ಡೈರೆಕ್ಟರ್, ಅರ್ ಡಿಎಮ್ ಪಾರ್ ಕ್ವಾಲಿಟಿ ಆಫ್ ಲೈಫ್ ಯುರೋಪಿಯನ್ ಮೆಡಿಕಲ್ ಅಸೋಸಿಯೇಶನ್, ಜರ್ಮನಿ, ವಿಜಯಲಕ್ಷ್ಮಿ ಆರ್. ರಾವ್, ಮೆಂಬರ್, ಬೋರ್ಡ್ ಆಫ್ ಗವರ್ನರ್ಸ್, ಶ್ರೀನಿವಾಸ್ ಯುನಿವರ್ಸಿಟಿ, ಮಂಗಳೂರು, ಪ್ರೊ. ಇಆರ್. ಎ. ಮಿತ್ರಾ ಎಸ್.ರಾವ್, ಬೋರ್ಡ್ ಆಫ್ ಗವರ್ನರ್ಸ್, ಶ್ರೀನಿವಾಸ್ ಯುನಿವರ್ಸಿಟಿ ಮತ್ತು ಕಾರ್ಯದರ್ಶಿಗಳು ಎ. ಶಾಮರಾವ್ ಫೌಂಡೇಶನ್, ಮಂಗಳೂರು, ಡಾ. ಸತ್ಯನಾರಾಯಣ ರೆಡ್ಡಿ, ಉಪ ಕುಲಪತಿ, ಶ್ರೀನಿವಾಸ ಯುನಿವರ್ಸಿಟಿ, ಮಂಗಳೂರು ಇವರು ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.
ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ತಿಪ್ಪೇಸ್ವಾಮಿ ಬಿ ಎಸ್, ಡಾ. ರವಿ ಜಿ ಎಸ್, ಪ್ರೊ. ಇ.ಎಮ್ ಡಾ. ಮೆಡ್, ಅಪು ರೋರಿಗ್, ಡಾ. ಸುಚೇತ ಕುಮಾರಿ ಎನ್, ಡಾ.ಮೆಡ್.ಕ್ರಿಸ್ಟೋಪರ್ ರೋರಿಗ್, ವಿಕಾಸ್ ಅರೋರ, ಕುಂಜನ್ ಅರೋರ, ಡಾ. ಗುರುಪ್ರಸಾದ್, ಡಾ. ಎ.ಕೆ, ಗ್ಯಾನಚಂದ್ರನ್, ಡಾ. ಪನೀರ್ ಸೆಲ್ವಮ್. ದಿನಾಂಕ 13.03.206ರಂದು ಪ್ರೀ ಕಾನ್ಪರೆನ್ಸ್ ಸೆಶನ್ನಲ್ಲಿ ಅವಿಕ್ ಘೋಶ್, ಸನ್ ಫಾರ್ಮ, ಹರಿಯಾಣ, ಡಾ. ಮಹಮ್ಮದ್ ರಶೀದ್, ಯುಎಸ್ಎ, ಬಿಜೋಯ್ ಪಿಲಿಪ್ ವರ್ಗೀಸ್, ಐರ್ಲಾಂಡ್ ಇವರು ಸಂಪನ್ಮೂಲ ವ್ಯಕಿಗಳಾಗಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಔಷಧೀಯ ವಿಜ್ಞಾನದ ಸಂಶೋಧನಾ ಪತ್ರಗಳನ್ನು ಮಂಡಿಸಲಾಗುವುದು. ಎಂದು ಕಾರ್ಯಕ್ರಮದ ಸಂಯೋಜಕರಾದ ಡಾ.ಎ.ಆರ್.ಶಬರಾಯ, ಪ್ರಾಂಶುಪಾಲರು ಶ್ರೀನಿವಾಸ ಫಾರ್ಮಸಿ ಕಾಲೇಜ್ ವಳಚ್ಚಿಲ್, ಮಂಗಳೂರು ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


