ಡಿಸಿಎಫ್‌ ಆಗಿ ಎವಿ ಸತೀಶ್‌ಗೆ ಬಡ್ತಿ

Upayuktha
0


ಮೈಸೂರು: ಹುಣಸೂರು ಆನೆ ಕಾರ್ಯಪಡೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ. ಸತೀಶ್ ಅವರಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ಬಡ್ತಿ ನೀಡಲಾಗಿದೆ. ಅವರನ್ನು ಮಂಗಳೂರಿನ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.


ಇದಲ್ಲದೇ ಕೊಡಗಿನ ತಿತಿಮತಿ ಪ್ರಾದೇಶಿಕ ವಿಭಾಗದ ಎಸಿಎಫ್‌ ಕೆ.ಪಿ. ಗೋಪಾಲ್‌ ಅವರನ್ನು ಕೊಡಗು ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವನ್ಯಜೀವಿ ಉಪವಿಭಾಗದ ಎಸಿಎಫ್‌ ವಿ.ಪಿ.ಕಾರ್ಯಪ್ಪ ಅವರನ್ನು ಕೊಡಗು ಆನೆ ಕಾರ್ಯಪಡೆ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ನೇಮಿಸಲಾಗಿದೆ. ಇದಲ್ಲದೇ ಶಿರಸಿ ಎಸಿಎಫ್‌ ಎಸ್‌.ಎಸ್‌.ನಿಂಗಾಣಿ, ದಾಂಡೇಲಿ ಎಸಿಎಫ್‌ ಸಂತೋಷ ಚವ್ಹಾಣ, ಹೊನ್ನಾವರ ಎಸಿಎಫ್‌ ಗೊಲ್ಲರಹಟ್ಟಿ ಲೋಹಿತ ಹಾಗೂ ಬಳ್ಳಾರಿ ಎಸಿಎಫ್‌ ಶರಣಕುಮಾರ್ ಅವರಿಗೂ ಬಡ್ತಿ ನೀಡಲಾಗಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top