ಉಡುಪಿಯಲ್ಲಿ 80 ಸಾ ಮಿಲ್ಗಳಿದ್ದರೆ ಉಳಿದ ಮಲೆನಾಡು, ಕರಾವಳಿ, ಮತ್ತಿತರ ಜಿಲ್ಲೆಗಳಲ್ಲಿ ಎಷ್ಟಿರಬಹುದು?
ಆ ಸಾಮಿಲ್ಗಳಿಗೆ ಮರಗಳನ್ನು ಎಲ್ಲಿಂದ ಪೂರೈಸಲಾಗುತ್ತಿದೆ?
ನಾಟಗಳ ಉತ್ಪಾದನೆ ಎಷ್ಟು? ಕನ್ಸಂಪ್ಷನ್ ಎಷ್ಟು? ಅಷ್ಟು ನಾಟಗಳನ್ನು ಬೆಳೆಯುತ್ತಿರುವುದು ಯಾರು? ಯಾವ ಜಾತಿಯ ಮರಗಳು?
ಅರಣ್ಯ ಸಚಿವರು ಉರುವಲಿಗೆ ಮರಗಳನ್ನು ಕಡಿಯುವ ಸಾಧ್ಯತೆ ಇದೆ, ಕಟ್ಟೆಚ್ಚರ ವಹಿಸಿ ಅಂತಾರೆ. ಜಿಲ್ಲಾಧಿಕಾರಿಗಳು ಗ್ಯಾಸ್ ಕೊರತೆಗೆ ಪರ್ಯಾಯ ಕಟ್ಟಿಗೆ ಬಳಸಿ ಅಂತಾರೆ!?
ರಕ್ತ ಬೀಜಾಸುರನ ರೀತಿಯಲ್ಲಿ ಬೆಳೆಯುತ್ತಿರುವ ಅಕೇಶಿಯವನ್ನು, ಮುಂದಿನ ಕೆಲ ದಿನಗಳಲ್ಲಿ ಉರುವಲಾಗಿ, ನಾಟವಾಗಿ ಬಳಸುವಂತೆ ಮಾಡಿ, ಸಂಪೂರ್ಣ ಅಕೇಶಿಯಾವನ್ನು ಬೇರು ಸಮೇತ ಕಿತ್ತು, ಮಲೆನಾಡನ್ನು ಅಕೇಶಿಯ ಮುಕ್ತ ಮಾಡಿ, ಸಹಜ ಜೀವ ವೈವಿಧ್ಯದ ಅರಣ್ಯ ಮಾಡಲು ಪ್ರಯತ್ನಿಸಲು ಇದು ಪ್ರಶಸ್ತ ಕಾಲ.
ವ್ಯವಸ್ಥೆಯ ಒಳಗಿರುವ ಒಬ್ಬೊಬ್ಬರು ಒಂದೊಂದು ವಿರುದ್ಧ ಮತ್ತು ಅಸ್ಪಷ್ಟ ಹೇಳಿಕೆ ಕೊಡುವುದು, ಸಾಮಾನ್ಯ ಜನ ಗೊಂದಲಗೊಳ್ಳುವುದೂ ತಪ್ಪಿಸಬಹುದು.
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248


