47ನೇ ಅಖಿಲ ಭಾರತ ಪ್ರಮುಖ ಬಂದರುಗಳ ವಾಲಿಬಾಲ್; 21ನೇ ಬೀಚ್ ವಾಲಿಬಾಲ್ ಟೂರ್ನಿ ಯಶಸ್ವಿ ಸಂಪನ್ನ

Upayuktha
0



ಮಂಗಳೂರು: ಮೇಜರ್ ಪೋರ್ಟ್ಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ ಹಾಗೂ ನವ ಮಂಗಳೂರು ಬಂದರು ಸ್ಪೋರ್ಟ್ಸ್ ಕೌನ್ಸಿಲ್ (ಎನ್‌ಎಂಪಿಎಸ್‌ಸಿ) ಸಹಯೋಗದಲ್ಲಿ, ಆಯೋಜಿಸಿದ್ದ 47ನೇ ಅಖಿಲ ಭಾರತ ಪ್ರಮುಖ ಬಂದರುಗಳ ವಾಲಿಬಾಲ್ ಟೂರ್ನಿ ಹಾಗೂ 21ನೇ ಬೀಚ್ ವಾಲಿಬಾಲ್ ಟೂರ್ನಿ 27.03.2026 ರಂದು ಪಣಂಬೂರಿನಲ್ಲಿರುವ ಎನ್‌ಎಂಪಿಎ ಕ್ರೀಡಾ ಸಂಕೀರ್ಣದಲ್ಲಿ ಯಶಸ್ವಿಯಾಗಿ ಸಮಾಪ್ತಿಯಾಯಿತು. ಭಾರತದೆಲ್ಲೆಡೆಯಿಂದ 10 ಪ್ರಮುಖ ಬಂದರುಗಳ ತಂಡಗಳು ಉತ್ಸಾಹಭರಿತವಾಗಿ ಭಾಗವಹಿಸಿದ್ದು, ಕ್ರೀಡಾಸ್ಫೂರ್ತಿ, ತಂಡಭಾವನೆ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ಪ್ರದರ್ಶಿಸಿದವು.


ವಾಲಿಬಾಲ್ ಟೂರ್ನಿಯಲ್ಲಿ ಕೊಚ್ಚಿನ್ ಬಂದರು ಪ್ರಾಧಿಕಾರ ತಂಡವು ನವ ಮಂಗಳೂರು ಬಂದರು ಪ್ರಾಧಿಕಾರ ತಂಡವನ್ನು 3–1 ಸೆಟ್‌ಗಳಲ್ಲಿ ಸೋಲಿಸಿ ಚಾಂಪಿಯನ್ ಪಟ್ಟವನ್ನು ಪಡೆದುಕೊಂಡಿತು. ಎನ್‌ಎಂಪಿಎ ರನ್ನರ್-ಅಪ್ ಸ್ಥಾನ ಪಡೆಯಿತು, ವಿ.ಓ. ಚಿದಂಬರನಾರ್ ಬಂದರು ಪ್ರಾಧಿಕಾರ ತಂಡವು ಚೆನ್ನೈ ಬಂದರು ಪ್ರಾಧಿಕಾರ ತಂಡವನ್ನು 2–0 ಸೆಟ್‌ಗಳಲ್ಲಿ ಸೋಲಿಸಿ ತೃತೀಯ ಸ್ಥಾನ ಪಡೆದುಕೊಂಡಿತು.


ಬೀಚ್ ವಾಲಿಬಾಲ್ ಟೂರ್ನಿಯಲ್ಲಿ ವಿ.ಓ. ಚಿದಂಬರನಾರ್ ಬಂದರು ಪ್ರಾಧಿಕಾರ ತಂಡವು ಕೊಚ್ಚಿನ್ ಬಂದರು ಪ್ರಾಧಿಕಾರ ತಂಡವನ್ನು 2–0 ಸೆಟ್‌ಗಳಲ್ಲಿ ಸೋಲಿಸಿ ಚಾಂಪಿಯನ್ ಪಟ್ಟವನ್ನು ಪಡೆದುಕೊಂಡಿತು. ಕ್ರೀಡಾಸ್ಫೂರ್ತಿಯ ಗಮನಾರ್ಹ ಉದಾಹರಣೆಯಾಗಿ, ವಿ.ಓ.ಸಿ ತಂಡದ ಒಬ್ಬ ಆಟಗಾರ ಗಾಯಗೊಂಡು ಮುಂದುವರಿಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೊಚ್ಚಿನ್ ಬಂದರು ಪ್ರಾಧಿಕಾರ ಫೈನಲ್ ಪಂದ್ಯದಿಂದ ಹೊರನಡೆಯಿತು. ಆ ವೇಳೆಗೆ ವಿ.ಓ. ಚಿದಂಬರನಾರ್ ಬಂದರು ಪ್ರಾಧಿಕಾರ ಮೊದಲ ಸೆಟ್ ಅನ್ನು 21–17 ಅಂಕಗಳಿಂದ ಗೆದ್ದಿದ್ದು, ಎರಡನೇ ಸೆಟ್‌ನಲ್ಲಿ 8–3 ಅಂಕಗಳಿಂದ ಮುನ್ನಡೆಯಲ್ಲಿತ್ತು. ಇದರಿಂದ ವಿ.ಓ.ಸಿ ಬಂದರು ಪ್ರಾಧಿಕಾರ ತಂಡವನ್ನು ವಿಜೇತರಾಗಿ ಘೋಷಿಸಲಾಯಿತು. ಬೀಚ್ ವಾಲಿಬಾಲ್ ಟೂರ್ನಿಯಲ್ಲಿ ಚೆನ್ನೈ ಬಂದರು ಪ್ರಾಧಿಕಾರ ತಂಡವು ಎನ್‌ಎಂಪಿಎ ವಿರುದ್ಧ ತೃತೀಯ ಸ್ಥಾನ ಪಡೆದುಕೊಂಡಿತು.


47ನೇ ಅಖಿಲ ಭಾರತ ಪ್ರಮುಖ ಬಂದರುಗಳ ವಾಲಿಬಾಲ್ ಟೂರ್ನಿ ಹಾಗೂ 21ನೇ ಬೀಚ್ ವಾಲಿಬಾಲ್ ಟೂರ್ನಿ ಸಮಾರೋಪ ಸಮಾರಂಭಕ್ಕೆ ಶ್ರೀಮತಿ ಎಸ್. ಶಾಂತಿ, ಉಪಾಧ್ಯಕ್ಷರು, ಎನ್‌ಎಂಪಿಎ ಅವರು ಅಧ್ಯಕ್ಷತೆ ವಹಿಸಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಎಲ್ಲಾ ತಂಡಗಳ ಉತ್ತಮ ಪ್ರದರ್ಶನವನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಶ್ರೀ ಪದ್ಮನಾಭಾಚಾರ್ ಕೆ., ಮುಖ್ಯ ಜಾಗ್ರತಾ ಅಧಿಕಾರಿ, ಎನ್‌ಎಂಪಿಎ, ಕ್ಯಾಪ್ಟನ್ ಮನೋಜ್ ಜೋಶಿ, ಉಪ ಸಂರಕ್ಷಣಾಧಿಕಾರಿ ಹಾಗೂ ಅಧ್ಯಕ್ಷರು, ಎನ್‌ಎಂಪಿಎಸ್‌ಸಿ, ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


ಕ್ಯಾಪ್ಟನ್ ಮನೋಜ್ ಜೋಶಿ, ಅಧ್ಯಕ್ಷರು, ಎನ್‌ಎಂಪಿಎಸ್‌ಸಿ, ಸ್ವಾಗತ ಭಾಷಣ ಮಾಡಿದರು. ಶ್ರೀಮತಿ ಎಸ್. ಶಾಂತಿ ಅವರು ವಿಜೇತ ತಂಡಗಳನ್ನು ಅಭಿನಂದಿಸಿ, ಎಲ್ಲಾ ಭಾಗವಹಿಸಿದ ತಂಡಗಳ ಕ್ರೀಡಾಸ್ಫೂರ್ತಿ ಮತ್ತು ಉತ್ಸಾಹವನ್ನು ಪ್ರಶಂಸಿಸಿದರು. ಶ್ರೀ ಗ್ಲಾಡ್‌ಸ್ಟೋನ್, ಪ್ರಧಾನ ಕಾರ್ಯದರ್ಶಿ, ಎನ್‌ಎಂಪಿಎಸ್‌ಸಿ ಅವರು ಧನ್ಯವಾದಗಳನ್ನು ಅರ್ಪಿಸಿದರು.


ಈ ಟೂರ್ನಿ ಪ್ರಮುಖ ಬಂದರುಗಳ ನಡುವೆ ಸ್ನೇಹಭಾವವನ್ನು ಬಲಪಡಿಸುವುದರೊಂದಿಗೆ, ತಂಡಭಾವನೆ, ಶಿಸ್ತಿನ ಮನೋಭಾವ ಹಾಗೂ ಏಕತೆಯನ್ನು ಉತ್ತೇಜಿಸುವಲ್ಲಿ ಕ್ರೀಡೆಯ ಮಹತ್ವವನ್ನು ಒತ್ತಿಹೇಳಿತು.



إرسال تعليق

0 تعليقات
إرسال تعليق (0)
To Top