ಕಾಸರಗೋಡು: ಕಾನಕೋಡ್ಲು ಶ್ರೀ ವನಶಾಸ್ತಾ ದೇವಸ್ಥಾನದಲ್ಲಿ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ ) ಕಾಸರಗೋಡು ವತಿಯಿಂದ 153 ನೇ ವೈವಿಧ್ಯಮಯ ನಿತ್ಯ ನೂತನ ಅತ್ಯಾಕರ್ಷಕ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಜರಗಿತು.
ಡಾ. ವಾಣಿಶ್ರೀ ಅವರ ನಿರೂಪಣೆ ಹಾಗೂ ಸಾಹಿತ್ಯ ಪ್ರಸ್ತುತಿಯೊಂದಿಗೆ ಆರಂಭವಾದ ಈ ಕಾರ್ಯಕ್ರಮ ದಲ್ಲಿ ಪ್ರೀತಿಕಾ ಪ್ರಸಾದ್ ಅವರ ರಿಂಗ್ ನೃತ್ಯ ಎಲ್ಲರ ಆಕರ್ಷಿಸಿತು. ಮಾನ್ವಿಸಾಗರ್ ಯೋಗ ನೃತ್ಯ ನೀಡಿ ಕಾರ್ಯಕ್ರಮಕ್ಕೆ ಹೊಸ ಮೆರುಗು ಕೊಟ್ಟರು. ನಾಟ್ಯಮಯೂರಿಗಳಾದ ಶರಣ್ಯ ಶೆಟ್ಟಿ ಹಾಗೂ ಪೂಜಾಶ್ರೀ ಅವರ ಜೋಡಿ ನೃತ್ಯ ಯಶಸ್ಸು ಗಳಿಸಿತು.
ಡಾ. ವಾಣಿಶ್ರೀ ಅವರಿಗೆ ದೇವರ ಸ್ಮರಣಿಕೆ, ಫಲ ಪುಷ್ಪ ಕೊಟ್ಟು ಕನ್ನಡ ಕಾರ್ಯಗಳಿಗೆ ಹರಸಿದರು. ಎಲ್ಲಾ ಕಲಾದೇವಿಯ ಮಕ್ಕಳಿಗೆ ಸಂಸ್ಥೆಯ ವತಿಯಿಂದ ಗೌರವ ಸ್ಮರಣಿಕೆ ಕೊಟ್ಟು ಪುರಸ್ಕಾರದ ಕಾರ್ಯಕ್ರಮವೂ ನಡೆಯಿತು. ವೇದಿಕೆಯಲ್ಲಿ ದೇವಸ್ಥಾನದ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


