ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್‌ನ ಏಳನೇ ಸಂಗೀತ ಸಮ್ಮೇಳನ

Upayuktha
0

ಬೆಂಗಳೂರು: ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಏಳನೇ ಸಂಗೀತ ಸಮ್ಮೇಳನವನ್ನು ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ (ಅಂಚೆ ಕಚೇರಿ ಸಮೀಪ) ಶ್ರೀರಾಮ ಮಂದಿರದಲ್ಲಿ ಜನವರಿ 9ರಿಂದ 11ರವರೆಗೆ ಆಯೋಜಿಸಲಾಗಿದೆ. ಸಂಗೀತ ಸಮ್ಮೇಳನದ ಅಧ್ಯಕ್ಷತೆಯನ್ನು ಖ್ಯಾತ ಗಾಯಕಿ ವಿದುಷಿ ಎಂ.ಎಸ್. ಶೀಲಾ ವಹಿಸಲಿದ್ದು, ಯುವ ಸಂಗೀತ ಸಮ್ಮೇಳನದ ಅಧ್ಯಕ್ಷರಾಗಿ ಖ್ಯಾತ ಕೊಳಲು ವಾದಕ ವಿದ್ವಾನ್ ಅಮಿತ್ ಎ. ನಾಡಿಗ್ ನೇಮಕಗೊಂಡಿದ್ದಾರೆ.

ಉದ್ಘಾಟನಾ ಕಾರ್ಯಕ್ರಮ ಜನವರಿ 9ರಂದು ಶುಕ್ರವಾರ ಸಂಜೆ 5.30ಕ್ಕೆ ನಡೆಯಲಿದ್ದು, ಸಂಗೀತ ಸಭಾ ಅಧ್ಯಕ್ಷರಾದ ಶ್ರೀ ಎಂ. ಅನಂತ್ ಉದ್ಘಾಟನೆ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಹಿರಿಯ ಗಾಯಕಿ ಡಾ|| ಟಿ.ಎಸ್. ಸತ್ಯವತಿ ಹಾಗೂ ಗೌರವ ಅತಿಥಿಗಳಾಗಿ ಶ್ರೀರಾಮ ಮಂದಿರದ ಅಧ್ಯಕ್ಷ ಶ್ರೀ ದತ್ತಾತ್ರೇಯಮೂರ್ತಿ (ದತ್ತು) ಮತ್ತು ಕಾರ್ಯದರ್ಶಿ ಶ್ರೀ ಚಂದ್ರಶೇಖರ್ ಭಾಗವಹಿಸಲಿದ್ದಾರೆ.


ಉದ್ಘಾಟನೆಯ ಬಳಿಕ ಸಂಜೆ 6.30ಕ್ಕೆ ವಿದುಷಿ ಎಂ.ಎಸ್. ಶೀಲಾ ಅವರ ಗಾಯನ ಕಾರ್ಯಕ್ರಮ ನಡೆಯಲಿದೆ. ವಿದುಷಿ ಅಪೇಕ್ಷ ಅಪ್ಪಾಲ (ಸಹಗಾಯನ), ವಿದುಷಿ ಹೆಚ್.ಎಂ. ಸ್ಮಿತಾ (ಪಿಟೀಲು), ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ (ಮೃದಂಗ) ಹಾಗೂ ವಿದ್ವಾನ್ ಆನೂರು ಸುನಾದ್ (ಖಂಜಿರ) ಸಹಕರಿಸಲಿದ್ದಾರೆ.


ಜನವರಿ 10, ಶನಿವಾರ ಬೆಳಗ್ಗೆ 10ಕ್ಕೆ ಮೊದಲ ಗೋಷ್ಠಿ “ಪಶ್ಚಿಮದಿಂದ ಪೂರ್ವಕ್ಕೆ ವಯೋಲಿನ್ ಪಯಣ” ವಿಷಯದೊಂದಿಗೆ ಡಾ|| ಜ್ಯೋತ್ಸ್ನಾ ಶ್ರೀಕಾಂತ್ ಅವರಿಂದ ನಡೆಯಲಿದೆ. ಬೆಳಗ್ಗೆ 11.40ಕ್ಕೆ “ಕರ್ನಾಟಕ ಸಂಗೀತಕ್ಕೆ ಮುತ್ತುಸ್ವಾಮಿ ದೀಕ್ಷಿತರ ಕೊಡುಗೆ” ಕುರಿತು ಡಾ|| ಎಸ್.ಸಿ. ಶರ್ಮಾ ಗೋಷ್ಠಿ ನಡೆಸುವರು. ಸಂಜೆ 6.30ಕ್ಕೆ ವಿದ್ವಾನ್ ಅಮಿತ್ ಎ. ನಾಡಿಗ್ (ಕೊಳಲು) ಅವರ ವಾದ್ಯ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ವಿದ್ವಾನ್ ವೈಭವ್ ರಮಣಿ (ಪಿಟೀಲು), ವಿದ್ವಾನ್ ಬಿ.ಆರ್. ಶ್ರೀನಿವಾಸ್ (ಮೃದಂಗ) ಹಾಗೂ ವಿದ್ವಾನ್ ಎಸ್. ಉತ್ತಮ್ (ಘಟ) ಭಾಗವಹಿಸಲಿದ್ದಾರೆ.


ಜನವರಿ 11, ಭಾನುವಾರ ಬೆಳಗ್ಗೆ 10ಕ್ಕೆ “ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಭಾಷಾಂಗ ರಾಗಗಳ ಸೊಬಗು” ವಿಷಯದ ಮೇಲೆ ಡಾ|| ರಾಜಲಕ್ಷ್ಮಿ ಗೋಷ್ಠಿ ನಡೆಸುವರು. ಬೆಳಗ್ಗೆ 11.40ಕ್ಕೆ “ಶ್ರೀವಿದ್ಯೆ ಮತ್ತು ಸಂಗೀತ – ನಾದ ಅನುಷ್ಟಾನ” ಕುರಿತು ಡಾ|| ಆರ್.ಎಸ್. ನಂದಕುಮಾರ್ ಮಾತನಾಡುವರು. ಸಂಜೆ 4.30ಕ್ಕೆ ವಿದ್ವಾನ್ ಕುನ್ನಕುಡಿ ಬಾಲಮುರಳಿಕೃಷ್ಣ ಅವರ ಗಾಯನ ಕಾರ್ಯಕ್ರಮ ನಡೆಯಲಿದ್ದು, ವಿದ್ವಾನ್ ಮೈಸೂರು ಎಂ. ಕೇಶವ್ (ಪಿಟೀಲು), ವಿದ್ವಾನ್ ತುಮಕೂರು ಬಿ. ರವಿಶಂಕರ್ (ಮೃದಂಗ) ಹಾಗೂ ವಿದ್ವಾನ್ ಶಮಿತ್ ಎಸ್. ಗೌಡ (ಘಟ) ಸಹಕರಿಸಲಿದ್ದಾರೆ.


ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 11ರಂದು ಸಂಜೆ 6.30ಕ್ಕೆ ನಡೆಯಲಿದ್ದು, ಸಮ್ಮೇಳನಾಧ್ಯಕ್ಷರಾದ ವಿದುಷಿ ಎಂ.ಎಸ್. ಶೀಲಾ ಅವರಿಗೆ “ಶೃತಿ ಲಯ ಭಾರತಿ” ಹಾಗೂ ಯುವ ಸಮ್ಮೇಳನಾಧ್ಯಕ್ಷರಾದ ವಿದ್ವಾನ್ ಅಮಿತ್ ಎ. ನಾಡಿಗ್ ಅವರಿಗೆ “ಸ್ವರ ಲಯ ಭಾರತಿ” ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಸಮಾರಂಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಶ್ರೀ ಸಿ.ಎನ್. ಅಶ್ವಥ್ ನಾರಾಯಣ ಮತ್ತು ಡಾ|| ಎಸ್.ಸಿ. ಶರ್ಮಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top