ಮಂಗಳೂರು: "ಯಕ್ಷಗಾನವು ಒಂದು ಸೀಮಿತ ವಲಯಕ್ಕೆ ಅಥವಾ ವರ್ಗಕ್ಕೆ ಮೀಸಲಾಗಿಲ್ಲ. ಕಲಾ ವಲಯವೇ ಇಂದು ಯಕ್ಷಗಾನದತ್ತ ಆಕರ್ಷಿತವಾಗಿದೆ. ನಮ್ಮ ಕರಾವಳಿಯಲ್ಲಂತೂ ಯಕ್ಷಗಾನವಿಲ್ಲದೆ ಕಾರ್ಯಕ್ರಮಗಳಿರುವುದು ಅಪರೂಪ. ಇಂತಹ ಒಂದು ಬಹುಮಾನ್ಯ ಕಲೆ ಕನ್ನಡವನ್ನು ಉಳಿಸುತ್ತಾ ಸಾಂಸ್ಕೃತಿಕ ನೆಲೆಗ ಟ್ಟನ್ನು ಭದ್ರಪಡಿಸುತ್ತಾ ಬರುತ್ತಿದೆ. ಸಂಘಟಕರ ಶ್ರಮ ಎದ್ದು ಕಾಣುತ್ತದೆ" ಎಂದು ಕಲ್ಕೂರ ಪ್ರತಿಷ್ಥಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ್ ಕಲ್ಕೂರ ಹೇಳಿದರು.
ಅವರು ಮಂಗಳಾದೇವಿಯಲ್ಲಿ ಜರಗಿದ ಯಕ್ಷ ತ್ರಿವೇಣಿಯಲ್ಲಿ ಸಮಾರೋಪ ಭಾಷಣ ಮಾಡಿದರು. ಅಲೆವೂರಾಯ ಪ್ರತಿಷ್ಠಾನದ ಗೌರವ ಸಂಚಾಲಕ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆವಹಿಸಿದ್ದರು. ಸಂಘಟಕ ಹಾಗೂ ಯಕ್ಷಗಾನ ಅಕಾಡೆಮಿಯ ಸದಸ್ಯ ಸಂಕಬೈಲು ಸತೀಶ ಅಡಪರನ್ನು ಸನ್ಮಾನಿಸಲಾಯಿತು.
ಕೆರೆಮನೆ ನರಸಿಂಹ ಹೆಗಡೆ, ಗೌತಂ ಭಂಡಾರಿ, ಸುಭದ್ರಾ ದೇವಿ ಅತಿಥಿಗಳಾಗಿದ್ದರು. ಅಲೆವೂರಾಯ ಸಹೋದರರು ನಿರ್ವಹಿಸಿ, ಧನ್ಯವಾದವಿತ್ತರು. ನಿವೃತ್ತ ಅಧ್ಯಾಪಕ ಸುಧಾಕರ ರಾವ್, ಪೇಜಾವರ ನಿರ್ವಹಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


