ಕಾರಂತರ ಅಧ್ಯಯನ ಯುವಜನಾಂಗದ ಸೃಜನಶೀಲತೆಗೆ ಪ್ರೇರಣೆ: ಡಾ.ವರದೇಶ್ ಹಿರೇಗಂಗೆ

Upayuktha
0



ಉಡುಪಿ: ಸ್ವಾತಂತ್ರ್ಯ ಪೂರ್ವದಲ್ಲಿ ಕನ್ನಡ ಸಾಹಿತ್ಯ ಕೃಷಿ ಆರಂಭಿಸಿದ ಡಾ. ಶಿವರಾಮ ಕಾರಂತರು ಈ ನೆಲದ ಸಂಸ್ಕೃತಿಯನ್ನು ತಮ್ಮ ಕೃತಿಗಳಲ್ಲಿ ಅಭಿವ್ಯಕ್ತಗೊಳಿಸಿದ್ದಾರೆ.  ಇಂದಿನಯುವ ಜನಾಂಗ ಅಧ್ಯಯನ ಮಾಡಿದಲ್ಲಿ ಅವರಿಗೆ ಸೃಜನಶೀಲ ಬರವಣಿಗೆಗೆ ಪ್ರೇರಣೆಯಾಗಬಹುದು ಎಂದು ಮಾಹೆಯ ಗಾಂಧಿ ಅಧ್ಯಾಯನ ಕೇಂದ್ರ ನಿರ್ದೇಶಕ ಡಾ ವರದೇಶ್ ಹಿರೇಗಂಗೆ ಅವರು ಹೇಳಿದರು. 


ಅವರು ಕನ್ನಡ ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್ ನ ಯುವ ಬರಹಗಾರರ ಸಮಾವೇಶ ಮತ್ತು  ಕಾರಂತ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಎಂ.ಜಿ.ಎಂಸಂಧ್ಯಾಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್. ನಾಯಕ್ ರವರು ಅಧ್ಯಕ್ಷತೆ ವಹಿಸಿದ್ದರು. 


ಮುಖ್ಯ ಅತಿಥಿಗಳಾಗಿ ಮಾತನಾಡಿದ ಡಾ. ಕೆ ಶ್ರೀಧರ್ ಪೈ, ಆಡಳಿತ ಅಧಿಕಾರಿಗಳು, ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಅವರು ಕಾರಂತರ ಬಹುಮುಖ ಪ್ರತಿಭೆ ಇಂದಿನ ವಿದ್ಯಾರ್ಥಿಗಳಿಗೆ ಪರಿಚಯವಾಗಲು ಈ ಶಿಬಿರ ಪೂರಕವಾಗಿದೆ ಎಂದುಶುಭಹಾರೈಸಿದರು. ಡಾ ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷರಾದ ಡಾ. ಗಣನಾಥ ಎಕ್ಕಾರುಆಶಯನುಡಿಗಳನ್ನು ಹೇಳಿದರು. 


ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ರವರು ಸ್ವಾಗತಿಸಿದರು. ಬರಹಗಾರ್ತಿಸುಧಾಆಡುಕಳ ಮತ್ತು ಪತ್ರಕರ್ತ ನಿತ್ಯಾನಂದ ಪಡ್ರೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

 

ಪ್ರಸೀಜ, ಪ್ರಜ್ಞಾ, ಭೂಮಿಕ ತಂಡದವರು ನಾಡಗೀತೆಯನ್ನು ಹಾಡಿದರು. ಪೂರ್ಣಿಮಾ ರವರು ಸ್ವಾಗತಿಸಿ ಪ್ರಜ್ಞಾ, ದ್ವಿತೀಯ ಬಿಸಿಎ ಧನ್ಯವಾದ ಸಮರ್ಪಿಸಿದರು. ಮಧುರ ದ್ವಿತೀಯ ಬಿಸಿಎ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top