ಬ್ಯಾಡ್ಮಿಂಟನ್ ಪಂದ್ಯಾಟ; ವಿವೇಕಾನಂದ PU ಕಾಲೇಜಿಗೆ ತೃತೀಯ ಸ್ಥಾನ

Upayuktha
0



ಪುತ್ತೂರು: ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ- ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತೃತೀಯ  ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ಬೆಸೆಂಟ್ ಪದವಿಪೂರ್ವ ಕಾಲೇಜು , ಮಂಗಳೂರು ಇದರ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ  ಕಾಲೇಜಿನ  ಬಾಲಕರ ತಂಡ ಭಾಗವಹಿಸಿ ತೃತೀಯ  ಸ್ಥಾನ ಪಡೆಯಿತು. 


ಈ ಪಂದ್ಯಾಟದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಹೇಮಂತ್ ಆರ್ ಗೌಡ, ಕೆ.ವೈಭವ್ ರೈ , ಮನೀಶ್ ಡಿ.ವಿ, ಅಜಯ್ ಎಸ್.ಕೆ , ಶ್ರೇಯಸ್ ಎಂ, ಪ್ರಜ್ವಲ್ ಡಿ, ತನಿಷ್ ಕುಮಾರ್.ಬಿ ಹಾಗೂ ಪ್ರಥಮ ವಿಜ್ಞಾನ ವಿಭಾಗದ ಚ್ಯವನ್.ಕೆ  ಭಾಗವಹಿಸಿರುತ್ತಾರೆ. ವಿದ್ಯಾರ್ಥಿಗಳು ಕಾಲೇಜಿನ ದೈಹಿಕಶಿಕ್ಷಣ ನಿರ್ದೇಶಕರಾದ  ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ಮಾರ್ಗದರ್ಶನ ಪಡೆದಿರುತ್ತಾರೆ. ಇವರನ್ನು ಕಾಲೇಜಿನ ಆಡಳಿಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪಸನ್ಯಾಸಕೇತರ ವೃಂದದವರು  ಅಭಿನಂದಿಸಿರುತ್ತಾರೆ.



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top