ಸೃಜನಶೀಲ ಬರವಣಿಗೆಯ ಮೂಲ ಸೂಕ್ಷ್ಮ ವೀಕ್ಷಣೆ: ಖದೀಜತ್ ದಿಶಾನಾ

Upayuktha
0



ಮಂಗಳೂರು: ಸೃಜನಶೀಲ ಬರವಣಿಗೆಗೆ ಜ್ಞಾನಕ್ಕಿಂತ ಸೂಕ್ಷ್ಮ ವೀಕ್ಷಣೆ, ಕಲ್ಪನೆ, ಭಾಷೆ ಮೇಲಿನ ಹಿಡಿತ ಮುಖ್ಯವಾಗಿರುತ್ತದೆ ಎಂದು ಈಡನ್ ಗ್ಲೋಬಲ್ ಶಾಲೆ ಶಿಕ್ಷಕಿ ಹಾಗೂ ಗ್ರಾಫಿಕ್ಸ್ ವಿನ್ಯಾಸಕಿ ಖದೀಜತ್ ದಿಶಾನಾ ಅವರು ಅಭಿಪ್ರಾಯಪಟ್ಟರು. 


ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ಆಂಗ್ಲಭಾಷಾ ವಿಭಾಗ ಮತ್ತು ಆಂತರಿಕ ಗುಣಮಟ್ಟ ಖಾತ್ರಿ ಕೋಶದ ವತಿಯಿಂದ ಹೆಸರಾಂತ ಆಂಗ್ಲಭಾಷಾ ಲೇಖಕ ಆರ್. ಕೆ. ನಾರಾಯಣನ್ ಅವರ ಹುಟ್ಟುಹಬ್ಬದ ಸ್ಮರಣಾರ್ಥ ಆಯೋಜಿಸಲಾಗಿದ್ದ ಸೃಜನಾತ್ಮಕ ಬರವಣಿಗೆ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. 


ಸೃಜನಶೀಲ ಬರವಣಿಗೆಯಲ್ಲಿ ಕಥಾವಸ್ತು, ಪಾತ್ರ ವರ್ಗ, ಸಂಭಾಷಣೆ, ದೃಷ್ಟಿಕೋನ, ಅನುಕ್ರಮ ಕಾಪಾಡಿಕೊಳ್ಳುವುದು ಮಾತ್ರವಲ್ಲದೇ, ಕಥಾನಿರೂಪಣೆ ಹಾಗೂ ಶಬ್ದಗಳ ಬಳಕೆ ನಿರ್ಣಾಯಕವಾಗಿರುತ್ತದೆ. ಬರಹಗಾರರಿಗೆ ಸಾಮಾನ್ಯ ವಿಷಯಗಳೂ ಮುಖ್ಯವಾಗಿರುತ್ತವೆ. ಹಾಗಾಗಿ, ಸರಳ ವಿಷಯಗಳ ಮೇಲೆ ಕೇಂದ್ರೀಕರಿಸುವ ಮೂಲಕ ಉತ್ತಮ ಬರಹಗಾರರಾಗಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 


ಸೃಜನಶೀಲ ಬರವಣಿಗೆ ಆಲೋಚನೆ, ಕಥೆಗಳ ಜಗತ್ತಿನ ಜೊತೆಗೆ ಸಂಬಂಧ ಹೆಣೆಯುತ್ತದೆ. ಯಾವುದೇ ಕೃತಿಯಲ್ಲಿ ಕುತೂಹಲ ಅತ್ಯಂತ ಮುಖ್ಯವಾದ ವಿಷಯ. ಆಗ ಮಾತ್ರ ಅಲ್ಲಿರುವ ಕಥಾವಸ್ತು ಮನಸ್ಸನ್ನು ಮಾತ್ರವಲ್ಲದೇ ಹೃದಯ ತಲುಪುತ್ತದೆ. ಸೃಜನಶೀಲತೆಗೆ ವಯಸ್ಸಿನ ಮಿತಿಯಿಲ್ಲ ಎಂದರು. 


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ವಿದ್ಯಾರ್ಥಿ ಹಂತದಲ್ಲೇ ಸೃಜನಶೀಲ ಬರವಣಿಗೆ ಮಾಡುವುದನ್ನು ಕಲಿಯುವುದು ಬಹಳ ಮುಖ್ಯ. ಬರವಣಿಗೆ ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿರಬಹುದು ಅಥವಾ ಅದರ ಹೊರತಾದದ್ದೂ ಆಗಿರಬಹುದು. ಇದು ಸೃಜನಶೀಲ ಬರವಣಿಗೆ ಕೌಶಲ್ಯವನ್ನು ಹೆಚ್ಚಿಸುತ್ತದೆ. ಆ ಮೂಲಕ ಬರವಣಿಗೆ ಸಾಮರ್ಥ್ಯ ಗುರುತಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಪ್ರೊ. ಸುಭಾಷಿಣಿ ಶ್ರೀವತ್ಸಾ, ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು. 



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top