ಮಂಗಳೂರು: ಹಬ್ಬದ ಉತ್ಸಾಹದ ಖರೀದಿ ನಡುವೆ ಜನರನ್ನು ಡಿಜಿಟಲ್ ವಂಚಕರು ಮೋಸಗೊಳಿಸುವ ಸಾಧ್ಯತೆ ಅಧಿಕವಾಗಿರುವ ಹಿನ್ನೆಲೆಯಲ್ಲಿ ಭದ್ರತಾ ಕ್ರಮಗಳನ್ನು ಅನುಸರಿಸುವಂತೆ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಸಲಹೆ ಮಾಡಿದೆ.
ಕೇವಲ ಅಧಿಕೃತ ಆ್ಯಪ್ಗಳು ಮತ್ತು ವೆಬ್ಸೈಟ್ಗಳಲ್ಲಿ ಮಾತ್ರ ಶಾಪಿಂಗ್ ಮಾಡುವುದು, ಪಾವತಿಗಳನ್ನು ಕೇವಲ ಪ್ಲಾಟ್ಫಾರ್ಮ್ನೊಳಗೆ ಮಾತ್ರ ಪೂರ್ಣಗೊಳಿಸುವುದು ಮತ್ತು ಉಚಿತ ವೋಚರ್ಗಳು ಮತ್ತು ಕ್ಯಾಶ್ಬ್ಯಾಕ್ ವಾಗ್ದಾನಗಳ ಬಗ್ಗೆ ಜಾಗರೂಕವಾಗಿರುವುದು ಉತ್ತಮ ಎಂದು ಅಧಿಕೃತ ಪ್ರಕಟಣೆ ಹೇಳಿದೆ.
ಅನಿರೀಕ್ಷಿತ ಓಟಿಪಿ ವಿನಂತಿಗಳನ್ನು ಎಚ್ಚರಿಕೆಯಾಗಿ ಪರಿಗಣಿಸಬೇಕು; ಕೆಲವು ಸಂದೇಶಗಳು "ಪಾವತಿ ವಿಫಲವಾಗಿದೆ" ಅಥವಾ "ಖಾತೆ ತಡೆಗಟ್ಟಲಾಗಿದೆ" ಎಂದು ಹೇಳಿ, ಸಮಸ್ಯೆಯನ್ನು "ಸರಿಪಡಿಸಲು" ಒಟಿಪಿಗಳನ್ನು ಕೇಳಬಹುದು. ಈ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕು ಎಂದು ಸ್ಪಷ್ಟನೆ ನೀಡಿದೆ.
ಮೋಸಗಾರರು "ಆಫರ್ ಶೀಘ್ರದಲ್ಲೇ ಮುಗಿಯಲಿದೆ" ಅಥವಾ "ನೀವು ಕಾರ್ಯನಿರ್ವಹಿಸದಿದ್ದರೆ ನಿಮ್ಮ ಖಾತೆ ತಡೆಗಟ್ಟಲಾಗುವುದು" ಎಂದು ಹೇಳಿ ತುರ್ತು ಪರಿಸ್ಥಿತಿಯನ್ನು ಸೃಷ್ಟಿಸುತ್ತಾರೆ. ನಿಜವಾದ ಪ್ಲಾಟ್ಫಾರ್ಮ್ಗಳು ಭಯ ಅಥವಾ ತ್ವರಿತ ಕ್ರಮ ತಂತ್ರಗಳನ್ನು ಬಳಸುವುದಿಲ್ಲ. ಪ್ರತಿಕ್ರಿಯೆ ನೀಡುವ ಮೊದಲು ಒಂದು ಕ್ಷಣ ನಿಂತು ಪರಿಶೀಲಿಸಿ ಮುಂದುವರಿಯಬೇಕು ಎಂದು ಸಲಹೆ ಮಾಡಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


