ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀಕ್ಷೇತ್ರದ ಧರ್ಮಾಧಿಕಾರಿಗಳಾದ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ಕಳೆದ ಕೆಲವಾರು ವರ್ಷಗಳಿಂದ ನಡೆಯುತ್ತಾ ಬಂದಿರುವ ಷಡ್ಯಂತ್ರದ ಪೊರೆ ಕಳಚುತ್ತಿದ್ದು, ಇಡೀ ದೇಶಕ್ಕೆ ಸತ್ಯದ ಅನಾವರಣ ಆಗುತ್ತಿದೆ. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಪಾವಿತ್ರ್ಯತೆ ಹಾಗೂ ಪೂಜ್ಯ ಹೆಗ್ಗಡೆಯವರ ನಿಷ್ಕಲ್ಮಷ ವ್ಯಕ್ತಿತ್ವದ ಶ್ರೇಷ್ಠತೆಯನ್ನು ಹಿಂದಿನಿಂದಲೂ ಒಪ್ಪಿಕೊಂಡು ಬಂದ ಬೆಳ್ತಂಗಡಿ ತಾಲೂಕಿನ ಸಮಸ್ತ ಭಕ್ತಾದಿಗಳು ಒಟ್ಟಾಗಿ ದೈವ- ದೇವರುಗಳಿಗೆ ತಮ್ಮ ಕೃತಜ್ಞತೆಯನ್ನು ಅರ್ಪಿಸುವ ಮತ್ತು ಸತ್ಯ, ನ್ಯಾಯದ ಜೊತೆಗೆ ನಾವು ಎಂದಿಗೂ ಇರುತ್ತೇವೆ ಎಂಬ ಸಂದೇಶವನ್ನು ಸಮಾಜಕ್ಕೆ ಸಾರುವ ಉದ್ದೇಶದಿಂದ ಸೆ. 28ರ ಭಾನುವಾರದಂದು ಶ್ರೀ ಕ್ಷೇತ್ರದಲ್ಲಿ ಒಂದಾಗಿ ಪವಿತ್ರವಾದ ಚಂಡಿಕಾ ಯಾಗ ಮತ್ತು ಸತ್ಯ ದರ್ಶನ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ.
ವತಿಯಿಂದ ಚಂಡಿಕಾ ಯಾಗಕ್ಕೆ ತಾಲೂಕಿನ ಎಲ್ಲಾ ಗ್ರಾಮಗಳ ಸಮರ್ಪಿಸಲ್ಪಡುವ ಫಲ-ಪುಷ್ಪಗಳ ಸಮರ್ಪಣೆಯ ಮೆರವಣಿಗೆ ಪೂರ್ವಾಹ್ನ 9-45 ಕ್ಕೆ ಶ್ರೀ ಕ್ಷೇತ್ರದ ಮಹಾದ್ವಾರದಿಂದ ಪ್ರಾರಂಭಗೊಂಡು, ಯಾಗ ಮಂಟಪವುಳ್ಳ ಅಮೃತವರ್ಷಿಣಿ ಸಭಾಂಗಣದವರೆಗೆ ನಡೆಯಲಿದೆ. 10-30 ಕ್ಕೆ ಸರಿಯಾಗಿ ಪೂಜ್ಯ ಧರ್ಮಾಧಿಕಾರಿಗಳ ಉಪಸ್ಥಿತಿಯಲ್ಲಿ ಯಾಗದ ಪೂರ್ಣಾಹುತಿಯು ವೇದ ವಿದ್ವಜ್ಜನರ ಮೂಲಕ ನಡೆಯಲಿದೆ.
ಪೂರ್ವಾಹ್ನ 11-00 ಗಂಟೆಗೆ ಸರಿಯಾಗಿ 'ಸತ್ಯದರ್ಶನ' ಸಮಾವೇಶ ನಡೆಯಲಿದ್ದು, ಪೂಜ್ಯ ಹೆಗ್ಗಡೆಯವರು ಸಂದೇಶ ನೀಡಲಿದ್ದಾರೆ. ಜನತೆಗೆ ತಾಲೂಕಿನ ಆಶೀರ್ವಚನಪೂರಕವಾದ ಸಂದೇಶವನ್ನು ತಾಲೂಕಿನ ಸಮಸ್ತ ಬಂಧುಗಳು ಈ ಪುಣ್ಯ ಹಾಗೂ ನ್ಯಾಯದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಚಂಡಿಕಾಯಾಗ & ಸತ್ಯದರ್ಶನ ಸಮಾವೇಶ ಸಂಚಾಲನಾ ಸಮಿತಿಯ ಸಂಚಾಲಕರಾದ ಮೋಹನ ಕುಮಾರ್ (ಲಕ್ಷ್ಮೀ ಗ್ರೂಪ್ಸ್, ಉಜಿರೆ), ಸುಬ್ರಹ್ಮಣ್ಯ ಕುಮಾರ್ ಅಗರ್ತ ನ್ಯಾಯವಾದಿ, ಬೆಳ್ತಂಗಡಿ ಕಳಕಳಿಯಿಂದ ವಿನಂತಿಸಿಕೊಂಡಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ