ಪ್ರಾತಿನಿಧಿಕ ಚಿತ್ರ
ಕಾಡು ಆನೆ ಕೊಪ್ಪಕೆ ಬಂತಂತೆ|
ಅದು ಯಾಕೆ ಬಂತೋ ||ಕಾಡು||
ಬೈನೆ ಹುಡುಕಿ ಹೊರಟಿದೆಯಂತೆ|
ಗುಂಡಿಯ ರಸ್ತೆಯ ನೆಚ್ಚಿತಂತೆ||ಗುಂಡಿ||
ಕಾಡು ಬದುಕು ಹಿತವಿಲ್ಲವಂತೆ
ಬೀದಿಲಿ ಈಗ ಯಾರಿಲ್ಲವಂತೆ||ಕಾಡು||
ಭರದಿ ಅಂಗಡಿ ಹೊಕ್ಕಿತಂತೆ|
ಜನರು ದೊಣ್ಣೆನೆ ಎತ್ತಿದರಂತೆ||ಜನರು||
ಹೆದರಿಸುವುದು ವ್ಯರ್ಥವಂತೆ|
ಕೊಪ್ಪ ಬೆಚ್ಚಿ ಬಿದ್ದಿತಂತೆ ||ಕಾಡು||
DJ ಶಾಸ್ತ್ರವ ಕೇಳಿತಂತೆ|
ಗಾದೆಯ ಮಾತ ಕಟ್ಟಿತಂತೆ||ಗಾದೆ||
ಆನೆ ನೆಡೆದುದೆ ದಾರಿಯಂತೆ
ಬಾಧೆ ಬವಣೆ ಪಡಿಸಿಹುದಂತೆ ||ಕಾಡು||
ಕಾನನ ಕಾನನ ತಿರುಗಿತಂತೆ|
ಹಾಂಗೂ ಹೀಂಗೂ ಕಳೆದೀತಂತೆ||ಹಾಂಗೂ||
ಕಾಡಲಿ ಏನೂ ಇಲ್ಲವಂತೆ|
ವೀರಭದ್ರನ ನೆನೆದಿದೆಯಂತೆ||ಕಾಡು||
ಗೋಬಿ ಮಂಚುರಿ ಕೇಳಿತಂತೆ|
ATM ಕಾರ್ಡು ಉಜ್ಜಿತಂತೆ ||ATM||
ಹಿರೀಕೆರೆಯ ಮೂಸಿತಂತೆ
ಕೊಳಕು ನೀರು ಎಂದಿತಂತೆ||ಕಾಡು||
ಆನೆಯ ಜನ್ಮವನೆತ್ತಿದೆಯಂತೆ|
ಮಾನವನಾಗಿ ಹುಟ್ಟಿತ್ತಂತೆ||ಮಾನವ||
ಪಟ್ಟಣ ಅಧಿಕಾರ ಹಿಡಿದಿತ್ತಂತೆ
ಮೇಯಲು ಪುನಃ ಬಂದಿದೆಯಂತೆ||ಕಾಡು||
ರೋಡನೆಲ್ಲ ಸುತ್ತಿತಂತೆ||
ಕಸದ ರಾಶಿಯ ನೋಡಿತಂತೆ||ಕಸದ||
ಏನು ಬದುಕು ನಿಮ್ಮದು ಎಂದು|
ನಕ್ಕು ಮುಂದಕೆ ಸಾಗಿತಂತೆ||ಕಾಡು||
(ಪುರಂದರ ವಿಠಲ ಮತ್ತು ಪುರಂದರ ದಾಸರ ಕ್ಷಮೆ ಕೋರಿ, ಒಂದು ಆನೆ ಅಣಕು ಪದ್ಯ)
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


