ಸಕ್ಷಮ ದ.ಕ ಜಿಲ್ಲಾ ಘಟಕದಿಂದ ದೈಗೋಳಿ ಸೇವಾಶ್ರಮಕ್ಕೆ ಭೇಟಿ

Upayuktha
0


ಮಂಗಳೂರು: ವರಮಹಾಲಕ್ಷ್ಮಿ ಪೂಜೆ ಹಾಗೂ ರಕ್ಷಾಬಂಧನದ ಸಂದರ್ಭದಲ್ಲಿ ಸಕ್ಷಮ ದ.ಕ.ಜಿಲ್ಲಾ ಘಟಕವು ಇಂದು (ಆ.8) ಶ್ರೀ ಸಾಯಿ ನಿಕೇತನ ಸೇವಾಶ್ರಮ ದೈಗೋಳಿ ಇಲ್ಲಿಗೆ ಭೇಟಿ ನೀಡಿತು.


ಸಕ್ಷಮ ಜಿಲ್ಲಾಧ್ಯಕ್ಷರಾದ ರಾಜಶೇಖರ ಭಟ್ಟ ಕಾಕುಂಜೆಯವರ ಜೊತೆಯಲ್ಲಿ, ಕಾರ್ಯದರ್ಶಿ ಹರೀಶ್ ಪ್ರಭು, ಸಹಕಾರ್ಯದರ್ಶಿ ಭಾಸ್ಕರ ಹೊಸಮನೆ, ಮಹಿಳಾ ಪ್ರತಿನಿಧಿ ಗೀತಾ ಲಕ್ಷ್ಮೀಶ್ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾದ ನಾರಾಯಣ ಮೂರ್ತಿ ಉಪಸ್ಥಿತರಿದ್ದರು.


ಡಾ. ಉದಯ್ ಕುಮಾರ್ ನೂಜಿ ಹಾಗೂ ಡಾ. ಶಾರದಾ ದಂಪತಿಗಳ ಕನಸಿನ ಕೂಸಾದ ಶ್ರೀ ಸಾಯಿ ನಿಕೇತನ ಸೇವಾಶ್ರಮವು ಶ್ರೀ ಸಾಯಿ ಸೇವಾ ಪ್ರತಿಷ್ಠಾನಮ್ ಚಾರಿಟೇಬಲ್ ಟ್ರಸ್ಟ್ ದೈಗೋಳಿ ಇದರ ಅಂಗ ಸಂಸ್ಥೆ. ಈ ಸಂಸ್ಥೆಯು ಸಾಮಾಜಿಕವಾಗಿ ನಿರ್ಲಕ್ಷ್ಯಕ್ಕೆ ಒಳಗಾದವರಿಗೆ, ಮಾನಾಸಿಕ ತೊಂದರೆಯಿಂದ ಬಳಲುತ್ತಿರುವವರಿಗೆ ಹಾಗೂ ಅನಾಥರಿಗೆ ಪುನರ್ವಸತಿ ಕೇಂದ್ರವಾಗಿದೆ. ಸುಮಾರು 120 ಫಲಾನುಭವಿಗಳು ಇಲ್ಲಿ ವಾಸಿಸುತ್ತಿದ್ದಾರೆ. ಎಲ್ಲರಿಗೂ ಉತ್ತಮ ರೀತಿಯ ವಸತಿ ಸಹಿತ ಆರೋಗ್ಯ ಸೇವೆಯನ್ನು ನೀಡಲಾಗುತ್ತಿದೆ.


ಸಂಸ್ಥೆಯ ಈ ಮಹೋನ್ನತ ಕಾರ್ಯವನ್ನು ಶ್ಲಾಘಿಸಿ ಅವರ ಅಗತ್ಯಗಳನ್ನು ಪರಿಗಣಿಸಿ ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ ಮಂಗಳೂರಿನ ಪ್ರತಿಷ್ಠಿತ ನಿಟ್ಟೆ ವಿಶ್ವವಿದ್ಯಾಲಯ ದೇರಳಕಟ್ಟೆ ಶಿಕ್ಷಣ ಸಂಸ್ಥೆ ನೆರವಿನಹಸ್ತ ಚಾಚಿದೆ. ಸಕ್ಷಮದ ವತಿಯಿಂದ 3 ವಾಟರ್ ಬೆಡ್‌ಗಳು ಹಾಗೂ ನಿಟ್ಟೆ ಶಿಕ್ಷಣ ಸಂಸ್ಥೆಯ ವಸತಿನಿಲಯದಿಂದ ಸಂಗ್ರಹಿದ 100ಕ್ಕೂ ಅಧಿಕ ಹಾಸಿಗೆಗಳನ್ನು ಸೇವಾಶ್ರಮಕ್ಕೆ ಉದಾರವಾಗಿ ನೀಡಲಾಯಿತು. ದೇಣಿಗೆಯನ್ನು ಸೇವಾಶ್ರಮದ ಪರವಾಗಿ ಸೈಕೋಲಾಜಿಸ್ಟ್ ಕುಮಾರಿ ರಮ್ಯಾ ಅವರು ಸ್ವೀಕರಿಸಿದರು. 


ಹಾಸಿಗೆಯನ್ನು ಸೇವಾಶ್ರಮಕ್ಕೆ ತಲುಪಿಸುವ ಸತ್ಕಾರ್ಯದಲ್ಲಿ ನಿಟ್ಟೆ ಶಿಕ್ಷಣ ಸಂಸ್ಥೆಯ NSS ಅಧಿಕಾರಿಗಳು, ವಸತಿ ಗೃಹದ ವಾರ್ಡನ್, ವಿದ್ಯಾರ್ಥಿಗಳು ಹಾಗೂ ವಾಹನ ಚಾಲಕರಾದ ರವಿಯಣ್ಣ ಮುಖ್ಯ ಭೂಮಿಕೆ ನಿರ್ವಹಿಸಿದ್ದಾರೆ. ಡಾ. ವರ್ಷ ಹಾಗೂ ಸಮಾಜ ಸೇವಕರಾದ ಅಕ್ಷಿತ್ ಶೆಟ್ಟಿ ಈ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.


ಎಲ್ಲರೂ ಸೇವಾಶ್ರಮದ ಸಮಾಜಮುಖಿ ಕಾರ್ಯವನ್ನು ಕಂಡು ಭಾವುಕರಾದರು. ಸಮಾಜ ಬಾಂಧವರು ಇಂತಹ ಸಂಸ್ಥೆಗಳಿಗೆ ತಮ್ಮಿಂದ ಆಗುವ ಎಲ್ಲ ರೀತಿಯ ಸಹಾಯ ಮಾಡಬೇಕೆಂದು ಅಭಿಪ್ರಾಯಪಟ್ಟರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top