(ಸಾಂಗತ್ಯ ಛಂದಸ್ಸಿನಲ್ಲಿ)
ಗೌರಿಯಪುತ್ರ ವಿನಾಯಕ ದೇವನೆ
ಚಾರುಕರದಲಿ ನೀ ಹರಸು|
ಮಾರಮರ್ದನ ಸುತ ಮೂಷಕವಾಹನ
ಕೋರುವೆ ವಿದ್ಯೆಯ ಕಲಿಸು||
ಮೋದಕ ಹಸ್ತನೆ ಪಾಪವಿನಾಶನೆ
ಬಾಧೆಯ ಕಳೆ ನೀ ಗಣೇಶ|
ವೇದಪಾರಂಗತ ಷಣ್ಮುಖ ಸೋದರ
ಮೋದವ ತೋರು ವಿಘ್ನೇಶ||
ಮೇರೆಯ ಮೀರದ ತೆರದಲಿ ಹಾರೈಸು
ಪಾರವಿಲ್ಲದ ನಲ್ಮೆ ತೋರು|
ಘೋರಪಾಪವ ಮಾಡದೊಲಿರಿಸು ತಂದೆಯೆ
ಕಾರುಣ್ಯ ದೃಷ್ಟಿಯ ಬೀರು||
ಗಜಮುಖ ಹೊಂದಿಹ ಪಾರ್ವತಿ ನಂದನ
ಸುಜನರ ಪೊರೆಯುವ ದೇವ|
ಭಜಿಸುವೆ ನಿನ್ನಯ ಪಾವನ ನಾಮವ
ವಿಜಯ ನೀಡುತ ಕಳೆ ನೋವ||
- ಅಶ್ವತ್ಥನಾರಾಯಣ, ಮೈಸೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ