ಶಿರ್ವ ಹಿಂದೂ ಪಿಯು ಕಾಲೇಜಿನಲ್ಲಿ ಜ್ಞಾನಾಮೃತ ಕಾರ್ಯಕ್ರಮ

Chandrashekhara Kulamarva
0


ಶಿರ್ವ: ಶಿರ್ವ ಹಿಂದೂ ಪಿ.ಯು. ಕಾಲೇಜಿನ ಆಶ್ರಯದಲ್ಲಿ ಜ್ಞಾನ ಚೇತನ ಟ್ರಸ್ಟ್ ವತಿಯಿಂದ "ಜ್ಞಾನಾಮೃತ ಕಾರ್ಯಕ್ರಮದಲ್ಲಿ ಸಿ.ಎ ಮತ್ತು ಸಿ.ಎಸ್.ಅಧ್ಯಯನ ಶೀಲ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮ ಉದ್ಘಾಟಿಸಿದ ಸಿ.ಎ. ಅಪೇಕ್ಷ ಶೆಟ್ಟಿ ಮಾತನಾಡಿ "ಸಿ.ಎ. ಮತ್ತು ಸಿ.ಎಸ್. ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುವ ತಮ್ಮ ಅನುಭಾಮೃತ ಮಾತುಗಳೊಂದಿಗೆ ಅಧ್ಯಯನದ ಸಂಪೂರ್ಣ ಮಜಲುಗಳನ್ನು ವಿವರಿಸಿ ನಿರಂತರ ಅಧ್ಯಯನ ಕಠಿಣ ಪರಿಶ್ರಮದಿಂದ ಅಧ್ಯಯನಶೀಲರಾಗಿ" ಎಂದು  ಕರೆ ನೀಡಿದರು.


ಸಭಾಧ್ಯಕ್ಷತೆಯನ್ನು ಜ್ಞಾನ ಚೇತನ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ ವಹಿಸಿ "ಇಂದಿನ ಸ್ಪಧಾ೯ತ್ಮಕ ಜಗತ್ತಿನಲ್ಲಿ ಪ್ರತಿಭಾವಂತ ವಾಣಿಜ್ಯ ಶಾಸ್ತ್ರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಾಕಷ್ಟು ಅವಕಾಶಗಳಿವೆ ಅದನ್ನು ಸದುಪಯೋಗ ಪಡಿಸಿಕೆುಾಳ್ಳುವಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು" ಎಂದು ತಿಳಿಸಿದರು.


ಸಭಾವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲ ಸುಂದರ ಮೇರ, ಅಕಾಡೆಮಿಕ್ ಮುಖ್ಯಸ್ಥರಾದ ಗುರುಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಅನನ್ಯ ಸ್ವಾಗತಿಸಿ, ಪೃಥ್ವಿರಾಜ್ ವಂದಿಸಿದರು. ಕಾವ್ಯಾ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top